Advertisement

ಚೆಕ್‌ ಅಮಾನ್ಯ ಪ್ರಕರಣ: 5.72 ಲಕ್ಷ ರೂ. ದಂಡ

11:25 PM Mar 04, 2023 | Team Udayavani |

ಬಂಟ್ವಾಳ: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸದ ಆರೋಪಿಗೆ ಬಂಟ್ವಾಳ ನ್ಯಾಯಾಲಯ ಚೆಕ್‌ ಅಮಾನ್ಯ (ಬೌನ್ಸ್‌) ಪ್ರಕರಣದಲ್ಲಿ 5,72,800 ರೂ. ದಂಡ ವಿಧಿಸಿ ಆದೇಶ ನೀಡಿದೆ.

Advertisement

ವಾಮದಪದವು ಪಾಲೊಟ್ಟು ನಿವಾಸಿ ಕೃಷ್ಣಪ್ಪ ಪೂಜಾರಿ ಪ್ರಕರಣದ ಆರೋಪಿಯಾಗಿದ್ದು, ಆತ ಬಂಟ್ವಾಳ ಪಿಎಲ್‌ಡಿ ಬ್ಯಾಂಕಿನಿಂದ ಸಾಲ ಪಡೆದು ಮರುಪಾವತಿಸಿರಲಿಲ್ಲ. ಬ್ಯಾಂಕಿಗೆ ಅವರು ನೀಡಿದ ಚೆಕ್‌ ಕೂಡ ಅಮಾನ್ಯಗೊಂಡಿತ್ತು. ಹೀಗಾಗಿ ಬ್ಯಾಂಕ್‌ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿಚಾರಣೆ ನಡೆಸಿದ ಬಂಟ್ವಾಳ ಸಿವಿಲ್‌ ಜಡ್ಜ್ ಹಿರಿಯ ವಿಭಾಗ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಒಟ್ಟು ದಂಡದಲ್ಲಿ 5 ಸಾವಿರ ರೂ. ನ್ಯಾಯಾಲಯ ಹಾಗೂ ಉಳಿದ ಮೊತ್ತವನ್ನು ಬ್ಯಾಂಕಿಗೆ ಪಾವತಿಸಲು ಆದೇಶಿಸಿದೆ. ಬ್ಯಾಂಕಿನ ಪರ ನ್ಯಾಯವಾದಿ ಶಿವಪ್ರಕಾಶ್‌ ಜೈನ್‌ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next