Advertisement

ದೈಹಿಕ ಸಂಬಂಧ: ಶಿಕ್ಷಕಿಯ ನಿಶ್ಚಿತಾರ್ಥದ ಬಳಿಕ ಸಾವಿಗೆ ಶರಣಾದ ವಿದ್ಯಾರ್ಥಿ!

06:26 PM Oct 13, 2022 | Team Udayavani |

ಚೆನ್ನೈ: ಶಿಕ್ಷಕಿ ಜೊತೆ ದೈಹಿಕ ಸಂಬಂಧ ಹೊಂದಿದ್ದ ವಿದ್ಯಾರ್ಥಿಯೊಬ್ಬ ಸಾವಿಗೆ ಶರಣಾದ ಬಳಿಕ ಶಿಕ್ಷಕಿಯನ್ನು ಬಂಧಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಶಿಕ್ಷಕಿ 18 ವರ್ಷದ ವಿದ್ಯಾರ್ಥಿ ಜತೆಗಿನ ಸಂಬಂಧವನ್ನು ಕಡಿದುಕೊಂಡ ನಂತರ ಈತ ಸಾವಿಗೆ ಶರಣಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.

Advertisement

ಇದನ್ನೂ ಓದಿ:ತಾನು ಹೆಣೆದ ಬಲೆಗೆ ಬಿದ್ದ ಕೋಲ್ಕತ್ತಾದ ಕುವರ? ಗಂಗೂಲಿ-ಬಿಸಿಸಿಐ ಸಂಬಂಧ ಹಳಸಲು ಕಾರಣ…

ಚೆನ್ನೈನ ಅಂಬತ್ತೂರ್ ನಲ್ಲಿನ ಅನುದಾನಿತ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಳು. ಈಕೆ ಕಳೆದ ಮೂರು ವರ್ಷಗಳಿಂದ ವಿದ್ಯಾರ್ಥಿಗೆ ಶಿಕ್ಷಕಿಯಾಗಿದ್ದಳು. ಕೆಲವು ಬಾರಿ ವಿದ್ಯಾರ್ಥಿ ಈಕೆಯ ಮನೆಗೂ ಭೇಟಿ ನೀಡುತ್ತಿದ್ದ ಎಂದು ವರದಿ ತಿಳಿಸಿದೆ.

ಶಿಕ್ಷಕಿಗೆ ನಿಶ್ಚಿತಾರ್ಥವಾದ ನಂತರ ವಿದ್ಯಾರ್ಥಿ ಜತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಳು. ಆದರೆ ವಿದ್ಯಾರ್ಥಿ ಶಿಕ್ಷಕಿ ಜತೆಗಿನ ಸಂಬಂಧ ಮುಂದುವರಿಸಲು ಬಯಸಿದ್ದ ಎಂದು ಅಂಬತ್ತೂರ್ ಮಹಿಳಾ ಪೊಲೀಸ್ ಇನ್ಸ್ ಪೆಕ್ಟರ್ ಜ್ಯೋತಿಲಕ್ಷ್ಮೀ ತಿಳಿಸಿದ್ದಾರೆ.

ವಿದ್ಯಾರ್ಥಿ ಕಳೆದ ತಿಂಗಳು ಆತ್ಮಹತ್ಯೆಗೆ ಶರಣಾಗಿದ್ದ. ಆದರೆ ಈತನ ಸಾವಿನ ಹಿಂದೆ ಏನೋ ಕಾರಣ ಇರಬೇಕೆಂದು ತಾಯಿ ಶಂಕಿಸಿದ್ದರು. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದು, ವಿದ್ಯಾರ್ಥಿಯ ಮೊಬೈಲ್ ನಲ್ಲಿ ಇಬ್ಬರ ಫೋಟೊ ಪತ್ತೆಯಾಗಿತ್ತು ಎಂದು ವರದಿ ವಿವರಿಸಿದೆ.

Advertisement

ಇತ್ತೀಚೆಗಷ್ಟೇ ತಮಿಳುನಾಡಿನ ಸೇಲಂನಲ್ಲಿ ಅಪ್ರಾಪ್ತ ವಿದ್ಯಾರ್ಥಿ ಜತೆ ವಿವಾಹವಾಗಿದ್ದ ಗರ್ಭಿಣಿ ಕಾಲೇಜು ವಿದ್ಯಾರ್ಥಿನಿಯೊಬ್ಬಳನ್ನು ಪೊಲೀಸರು ಬಂಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next