Advertisement

ಸಳ್ವಾಡಿ ಕಕ್ಕೇರಿ: ಮತ್ತೂಂದು ಚಿರತೆ ಸೆರೆ

03:05 AM Nov 17, 2018 | Team Udayavani |

ಕೋಟೇಶ್ವರ: ಸಳ್ವಾಡಿಯ ಕಕ್ಕೇರಿ ಬಳಿ ಕಾಡಿನಲ್ಲಿ ಇರಿಸಲಾಗಿದ್ದ ಅರಣ್ಯ ಇಲಾಖೆಯ ಬೋನಿಗೆ ನ. 16ರ ಬೆಳಗಿನ ಜಾವ ಚಿರತೆ ಬಿದ್ದು  ಸೆರೆಯಾಗಿದೆ. ಕಳೆದ 4 ದಿವಸಗಳ ಹಿಂದೆ  ಅಲ್ಲಿನ ನಿವಾಸಿ ಚಂದ್ರಶೇಖರ ಶೆಟ್ಟಿ ಅವರ ಮನೆ ಸನಿಹದ ಹಾಡಿಯಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಹೆಣ್ಣು ಚಿರತೆ ಸೆರೆಯಾಗಿತ್ತು. ಅದರ ಬೆನ್ನಲ್ಲೇ ಭಾರೀ ಗಾತ್ರದ ಗಂಡು ಚಿರತೆ ಅದೇ ಬೋನಿಗೆ ಬಿದ್ದಿರುವುದು ಗ್ರಾಮಸ್ಥರಲ್ಲಿ ಭಯದ ವಾತಾವರಣ ಉಂಟುಮಾಡಿದೆ. ಈ ಭಾಗದಲ್ಲಿ ಕಳೆದ ಹಲವಾರು ದಿವಸಗಳಿಂದ ಚಿರತೆಗಳ ಸಂಚಾರದ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.

Advertisement

ಗ್ರಾಮಸ್ಥರ ಬೇಡಿಕೆಯಂತೆ ಕಾಡಿನ ಮಧ್ಯದಲ್ಲಿ  ಚಿರತೆ ಸೆರೆಹಿಡಿಯಲು ಬೋನಿನ ವ್ಯವಸ್ಥೆ ಮಾಡಲಾಗಿತ್ತು. ಚಿರತೆಯು ಬೋನಿನಲ್ಲಿ ಬಿದ್ದ ವಿಚಾರ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆ ಸೆರೆ ಹಿಡಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next