Advertisement

ಹನೂರು: ಚಿರತೆ ದಾಳಿಗೆ ದನಗಾಹಿ ವೃದ್ಧ, ಕರು ಬಲಿ

01:26 PM Sep 23, 2022 | Team Udayavani |

ಹನೂರು: ಚಿರತೆ ದಾಳಿಗೆ ದನಗಾಹಿ ವೃದ್ಧ ಮತ್ತು ಒಂದು ಕರು ಮೃತಪಟ್ಟಿರುವ ಘಟನೆ ತಾಲೂಕಿನ ಕೆವಿಎನ್ ದೊಡ್ಡಿ ಗ್ರಾಮದಲ್ಲಿ ಜರುಗಿದೆ.

Advertisement

ಹನೂರು ತಾಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ನಿವಾಸಿ ಗೋವಿಂದಯ್ಯ (65) ಮೃತಪಟ್ಟ ದನಗಾಹಿ ವೃದ್ಧ ಎಂದು ತಿಳಿದು ಬಂದಿದೆ. ಈತ ದನಗಳನ್ನು ಮೇಯಿಸಲು ತೆರಳಿದ್ದಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

ಗೋವಿಂದಯ್ಯ ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಆತನ ಕುಟುಂಬಸ್ಥರು ಆತನನ್ನು ಹುಡುಕಿಕೊಂಡು ಹೋದಾಗ ಆತನ ಮೃತ ದೇಹ ಪತ್ತೆಯಾಗಿದೆ. ಆತನ ಮೃತ ದೇಹವನ್ನು ನೋಡಲು ಸಾರ್ವಜನಿಕರು ತೆರಳುತ್ತಿದ್ದ ಅದೇ ವೇಳೆಗೆ ಚಿರತೆ ಮತ್ತೊಂದು ಕರುವನ್ನೂ ಸಹ ಹೊತ್ತೊಯ್ದಿದೆ.

ಘಟನೆಯಿಂದ ಗ್ರಾಮಸ್ಥರು ಆತಂಕಗೊಂಡಿದ್ದು, ಕೂಡಲೇ ಚಿರತೆಯನ್ನು ಸೆರೆ ಹಿಡಿಯಲು ಕ್ರಮ ವಹಿಸುವಂತೆ ಆಗ್ರಹಿಸಿದ್ದಾರೆ.

 

Advertisement

 

 

 

Advertisement

Udayavani is now on Telegram. Click here to join our channel and stay updated with the latest news.

Next