Advertisement

ಹುಣಸೂರು: ಚಿರತೆ ದಾಳಿಗೆ ಕರು ಬಲಿ

12:57 PM Sep 28, 2022 | Team Udayavani |

ಹುಣಸೂರು: ಮನೆ ಮುಂದೆ ಕಟ್ಟಿ ಹಾಕಿದ್ದ ಇಲಾತಿ ಕರುವನ್ನು ಚಿರತೆ ಕೊಂದು ಹಾಕಿರುವ ಘಟನೆ ತಾಲೂಕಿನ ಪೆಂಜಹಳ್ಳಿಯಲ್ಲಿ ಸೆ.27ರ ರಾತ್ರಿ ನಡೆದಿದೆ.

Advertisement

ಹನಗೋಡು ಹೋಬಳಿಯ ನಿವಾಸಿಯೊಬ್ಬರಿಗೆ ಸೇರಿದ ಇಲಾತಿ ಕರು ಇದಾಗಿದ್ದು, ಸಂಜೆ ಮನೆ ಬಳಿ ಹಸುಗಳನ್ನು ಕಟ್ಟಿ ಹಾಕಿದ್ದರು. ರಾತ್ರಿ ಹಸುಗಳ ಚೀರಾಟ ಕೇಳಿ ಹೊರ ಬಂದ ಸಂದರ್ಭ ಚಿರತೆ ಕಂಡು ಕೂಗಿಕೊಂಡಿದ್ದಾರೆ. ಕೂಗಾಟ ಕೇಳಿ ಕರುವಿನ ಕುತ್ತಿಗೆಯನ್ನು ಕಚ್ಚಿ ಎಳೆದೊಯ್ಯುಲು ಪ್ರಯತ್ನಿಸುತ್ತಿದ್ದ   ಚಿರತೆ ಕರುವನ್ನು ಬಿಟ್ಟು ಪರಾರಿಯಾಗಿದೆ. ತಕ್ಷಣವೇ ಗ್ರಾಮಸ್ಥರು ಕರುವಿಗೆ ಉಪಚರಿಸಿದರಾದರೂ ಕರು ಸಾವನ್ನಪ್ಪಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next