Advertisement

Belthangady ಚೆಕ್‌ ಬೌನ್ಸ್‌ ಪ್ರಕರಣ: ಆರೋಪಿಗಳ ಖುಲಾಸೆ

08:42 PM Jan 20, 2024 | Team Udayavani |

ಬೆಳ್ತಂಗಡಿ: ಆರು ಪ್ರತ್ಯೇಕ ಚೆಕ್‌ ಬೌನ್ಸ್‌ ಪ್ರಕರಣಗಳ ಆರೋಪಿಗಳನ್ನು ವಿವಿಧ ನ್ಯಾಯಾಲಯಗಳು ದೋಷಮುಕ್ತಗೊಳಿಸಿ ತೀರ್ಪು ನೀಡಿವೆ.

Advertisement

ಮಂಗಳೂರಿನ ಪಾವೂರು ನಿವಾಸಿ ಚಂದ್ರಹಾಸ ಅಮೀನ್‌ ವಿರುದ್ಧ ಸಲ್ಲಿಸಲಾಗಿದ್ದ 4,75,000 ರೂ. ಮೊತ್ತದ ಚೆಕ್‌ ಬೌನ್ಸ್‌ ಪ್ರಕರಣ, ಮುಂಡಾಜೆಯ ಗುಣಪಾಲ ಎಂ.ಎಸ್‌. ವಿರುದ್ಧದ 81,721 ರೂ. ಪ್ರಕರಣ, ಕಾಜೂರಿನ ಸಮೀರ್‌ ವಿರುದ್ಧದ 1 ಲಕ್ಷ ರೂ. ಪ್ರಕರಣ ಹಾಗೂ ಮೂಡುಬಿದಿರೆ ನಿವಾಸಿ ಸುನಿಲ್‌ ವಿರುದ್ಧದ 45,000 ರೂ. ಪ್ರಕರಣವನ್ನು ಬೆಳ್ತಂಗಡಿಯ ಹಿರಿಯ ಸಿವಿಲ್‌ ನ್ಯಾಯಾಲಯ ಖುಲಾಸೆಗೊಳಿಸಿದೆ.

ಅದೇ ರೀತಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್‌ ನ್ಯಾಯಾಲಯದಲ್ಲಿ ಮುಂಡಾಜೆ ನಿವಾಸಿ ಪ್ರಸಾದ್‌ ಶೆಟ್ಟಿ ವಿರುದ್ಧ ದಾಖಲಾಗಿದ್ದ 1 ಲ.ರೂ. ಚೆಕ್‌ಬೌನ್ಸ್‌ ಪ್ರಕರಣ, ಮಂಗಳೂರಿನ ಸೆಷನ್ಸ್‌ ನ್ಯಾಯಾಲಯದಲ್ಲಿ ಮುಂಡಾಜೆಯ ನಿವಾಸಿ ರವಿ ಎನ್‌. ವಿರುದ್ಧ ದಾಖಲಾಗಿದ್ದ 5,65,000 ರೂ. ಚೆಕ್‌ ಬೌನ್ಸ್‌ ಪ್ರಕರಣಗಳಲ್ಲೂ ಆರೋಪಿಗಳನ್ನು ನಿರ್ದೋಷಿ ಎಂದು ನ್ಯಾಯಾಲಯಗಳು ತೀರ್ಪು ನೀಡಿವೆ.

ಈ ಎಲ್ಲ ಪ್ರಕರಣಗಳಲ್ಲಿ ಆರೋಪಿಗಳ ಪರವಾಗಿ ಲೆಕ್ಸ್‌ ವಿಷನ್‌ ಲಾ ಚೇಂಬರ್ಸ್‌ (ಬೆಳ್ತಂಗಡಿ ಹಾಗೂ ಬೆಂಗಳೂರು)ನ ನ್ಯಾಯವಾದಿಗಳಾದ ನವಾಜ್‌ ಶರೀಫ್‌ ಎ., ಮಮ್ತಾಜ್‌ ಬೇಗಂ, ಇರ್ಷಾದ್‌ ಮತ್ತು ಸಪ್ನಾಝ್ ಅವರನ್ನು ಒಳಗೊಂಡ ವಕೀಲರ ತಂಡ ವಾದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next