Advertisement

ಚೌರಾಸಿಯಾ ಬಾನ್ಸುರಿ ಧ್ಯಾನ

07:26 PM Jan 24, 2020 | Lakshmi GovindaRaj |

“ವಿಮಾನ ಏರುವುದಕ್ಕೂ ಮೊದಲು, ಕೊಳಲನ್ನು ನುಡಿಸುತ್ತಾ ನುಡಿಸುತ್ತಾ ಆಕಾಶ ಕಂಡವನು ನಾನು. ಮನಸ್ಸು ಹಕ್ಕಿಯಾಗಿ, ಭೂಮಿಗೆ ಇಳಿಯುವುದನ್ನೇ ಮರೆಯುತ್ತಿದ್ದೆ’ ಎಂದವರು, ಬಾನ್ಸುರಿ ವಾದಕ ಹರಿಪ್ರಸಾದ್‌ ಚೌರಾಸಿಯಾ. ಅವರಷ್ಟೇ ಅಲ್ಲ, ಅವರ ಬಾನ್ಸುರಿ ದನಿ ಕೇಳಿದ ಯಾರೂ, ಹಾಗೆ “ಗಗನಯಾನಿ’ ಆಗಬಲ್ಲರು.

Advertisement

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿರುವ ಹರಿಪ್ರಸಾದ್‌ ಕಾರ್ಯಕ್ರಮ ನೀಡುವುದಕ್ಕಾಗಿ ಸಾಕಷ್ಟು ಸಲ ಬೆಂಗಳೂರಿಗೆ ಬಂದಿದ್ದಾರೆ. ಹಾಗೆ ಬಂದು ಹೋದಾಗಲೆಲ್ಲ, ಕೊಳಲ ಗುಂಗಿ ನಲ್ಲಿ ತೇಲಿಸಿಯೇ ಹೋಗಿರು­ವುದು ವಿಶೇಷ. ಇದೀಗ ಮತ್ತೆ ಅವರು, ಬೆಂಗಳೂರಿನಲ್ಲಿ ಶೋಗೆ ಸಜ್ಜಾಗಿದ್ದಾರೆ. ತಣ್ಣನೆ ಚಳಿಯಲ್ಲಿ, ಮೈಮರೆಸುವ ಕೊಳಲಿನ ದನಿ, ಹೃದಯಕ್ಕೆ ಇಳಿಸುವ ಆ ಮಧುರ ಗಳಿಗೆಗೆ ಸಾಕ್ಷಿಯಾಗುವ ಸರದಿ ನಮ್ಮದಷ್ಟೇ.

ಯಾವಾಗ?: ಜ.25, ಶನಿವಾರ, ಸಂ.7.30
ಎಲ್ಲಿ?: ಫೋರಂ ಶಾಂತಿನಿಕೇತನ ಮಾಲ್‌, ವೈಟ್‌ಫೀಲ್ಡ್‌
ಪ್ರವೇಶ: 699 ರೂ. ಮೇಲ್ಪಟ್ಟು

Advertisement

Udayavani is now on Telegram. Click here to join our channel and stay updated with the latest news.

Next