Advertisement

ಚಾರ್ಮಾಡಿಯಲ್ಲಿ ಬೈಕ್‌ ಸವಾರನ ಮೇಲೆ ಹರಿದ ಟ್ರಕ್, ಸವಾರ ಸ್ಥಳದಲ್ಲೇ ಸಾವು

11:14 PM Jun 07, 2022 | Team Udayavani |

ಬೆಳ್ತಂಗಡಿ : ಚಾರ್ಮಾಡಿ ಪಂಡಿಕಟ್ಟೆ ಎಂಬಲ್ಲಿ ಬೈಕ್ ಬೈಕ್ ನಡುವೆ ಪರಸ್ಪರ ಢಿಕ್ಕಿ ವೇಳೆ ರಸ್ತೆಗೆ ಎಸೆಯಲ್ಪಟ್ಟ ಸವಾರನ ಮೇಲೆ ಹಿಂಬದಿಯಿಂದ ಬಂದ ಟ್ರಕ್ ಹರಿದು ಸ್ಥಳದಲ್ಲೆ ಮೃತಪಟ್ಟ ಘಟನೆ ರಾತ್ರಿ ಮಂಗಳವಾರ ರಾತ್ರಿ ಸುಮಾರು 9.30 ರ ಸುಮಾರಿಗೆ ಸಂಭವಿಸಿದೆ.

Advertisement

ಚಾರ್ಮಾಡಿ ಮೇಗಿನಮನೆ ಇಸ್ಮಾಯಿಲ್ ಅವರ ಪುತ್ರ ನಿವಾಸಿ ನಝೀರ್ ಮೇಗಿನಮನೆ (24) ಮೃತಪಟ್ಟ ಯುವಕ.

ಚಾರ್ಮಾಡಿ ಸಮೀಪ ತನ್ನ ಸ್ನೇಹಿತನ ಮನೆಗೆಂದು ತೆರಳಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಎದುರು ಬದಿಯಿಂದ ಲಾರಿಯನ್ನು ಹಿಂದಿಕ್ಕುವ ಬರದಲ್ಲಿ ಎದುರು ಬರುತ್ತಿದ್ದ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ನಝೀರ್ ರಸ್ತೆಗೆ ಎಸೆಯಲ್ಪಟ್ಟಿದ್ದ. ಈ ವೇಳೆ ಈತನ ಮೇಲೆ ಟ್ರಕ್ ಹರಿದಿದೆ. ಈ ಕುರಿತು ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣೆ ಸಿಬಂದಿಗಳು ಭೇಟಿ ನೀಡಿದ್ದಾರೆ. ಮೃತದೇಹ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.

ಮೃತ ಯುವಕ ಲಾರಿ ನಿರ್ವಾಹಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ತಂದೆ, ತಾಯಿ ಓರ್ವ ಸಹೋದರನನ್ನು ಅಗಲಿದ್ದಾನೆ.

ಇದನ್ನೂ ಓದಿ : ವಿಜಯಪುರ : ಉಪಹಾರ ಸೇವಿಸಿದ ವಸತಿ ಶಾಲೆಯ 25 ಬಾಲಕಿಯರು ಅಸ್ವಸ್ಥ : ಆಸ್ಪತ್ರೆಗೆ ದಾಖಲು

Advertisement
Advertisement

Udayavani is now on Telegram. Click here to join our channel and stay updated with the latest news.

Next