Advertisement

Charmadi ಹೆದ್ದಾರಿ ಅಭಿವೃದ್ಧಿ ಕಾಮಗಾರಿ: ಇಂದು ಶಿಲಾನ್ಯಾಸ

12:18 AM Feb 22, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಎರಡು ಹೆದ್ದಾರಿ ಕಾಮಗಾರಿಗಳಿಗೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್‌ ಗಡ್ಕರಿ ಅವರು ಫೆ.22ರಂದು ಶಿಲಾನ್ಯಾಸ ನೆರವೇರಿಸುವರು.

Advertisement

ರಾಷ್ಟ್ರೀಯ ಹೆದ್ದಾರಿ 73ರ ಉಜಿರೆ- ಧರ್ಮಸ್ಥಳ-ಪೆರಿಯಶಾಂತಿ ವರೆಗಿನ 614 ಕೋಟಿ ರೂ. ವೆಚ್ಚದ ಸುಮಾರು 28.50 ಕಿ.ಮೀ. ಉದ್ದದ ದ್ವಿಪಥ ರಸ್ತೆ ಅಗಲಗೊಳಿಸುವಿಕೆ (ಪೇವ್‌ ಶೋಲ್ಡರ್‌ ಸಹಿತ) ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟ್‌ ಪ್ರದೇಶದಲ್ಲಿ 344 ಕೋಟಿ ವೆಚ್ಚದ ಸುಮಾರು 11 ಕಿ.ಮೀ ದ್ವಿಪಥ ರಸ್ತೆ ಅಗಲಗೊಳಿಸುವಿಕೆ (ಪೇವ್‌ ಶೋಲ್ಡರ್‌ ಸಹಿತ) ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಲಿದೆ.

ಶಿವಮೊಗ್ಗದಲ್ಲಿ ಫೆ.22ರಂದು ನಡೆಯುವ ಸಮಾರಂಭದಲ್ಲಿ ಮೇಲಿನ 2 ಯೋಜನೆ ಸೇರಿದಂತೆ 13 ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next