Advertisement

ಹೆಚ್ಚಿದ ಮಳೆ ಪ್ರಮಾಣ : ಚಾರ್ಮಾಡಿ ಘಾಟಿ 7ನೇ ತಿರುವಿನಲ್ಲಿ ರಸ್ತೆಗೆ ಉರುಳಿ ಬಿದ್ದ ಬಂಡೆ

02:40 PM Sep 12, 2021 | Team Udayavani |

ಬೆಳ್ತಂಗಡಿ : ಮಳೆ ಪ್ರಮಾಣ ಹೆಚ್ಚಿದ್ದರಿಂದ ಚಾರ್ಮಾಡಿ ಘಾಟಿ 7ನೇ ತಿರುವಿನ ಬಳಿ ಮಧ್ಯಮ ಗಾತ್ರದ ಬಂಡೆ ಕುಸಿದು ರಸ್ತೆಗೆ ಉರುಳಿದ್ದು ಸದ್ಯ ಈ ಪ್ರದೇಶದಲ್ಲಿ ಯಾವುದೇ ಹಾನಿ ಸಂಭವಿಸಿಲ್ಲ, ವಾಹನ ಓಡಾಟಕ್ಕೂ ಸಮಸ್ಯೆಯಾಗಿಲ್ಲ.

Advertisement

ಮಂಜಿನ ವಾತಾವರಣ ಹೆಚ್ಚಿರುವುದರಿಂದ ಇರುವುದರಿಂದ ತಕ್ಷಣ ತೆರವು ಅಗತ್ಯವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಲಾಗಿದ್ದು ತೆರವು ಕಾರ್ಯ ನಡೆಸಲಾಗುತ್ತಿದೆ.

ರವಿವಾರವಾದ್ದರಿಂದ ರಜೆಯಲ್ಲಿ ವಾಹನಗಳ ಓಡಾಟ ಸಹಜವಾಗಿದೆ. ರಜೆಯ ಮೋಜು ಸವಿಯಲು ಬರುವ ಪ್ರವಾಸಿಗರು ಕೊಂಚ ಎಚ್ಚರ ವಹಿಸುವುದು ಅಗತ್ಯ. ಸೆಲ್ಫಿ ತೆಗೆಯಲು ರಸ್ತೆಗಳಲ್ಲೆ ವಾಹನಗಳನ್ನು ನಿಲ್ಲಿಸುವುದು ಕಂಡುಬರುವುದರಿಂದ ಇಲಾಖೆಗಳು ಗಮನ ಹರಿಸಬೇಕಿದೆ.

ಇದನ್ನೂ ಓದಿ :ಕುಟುಂಬ ರಾಜಕಾರಣಕ್ಕೆ ಅಡಿಪಾಯ ಹಾಕಿದ್ದೇ ಇಂದಿರಾ ಗಾಂಧಿ : ನಟ ಚೇತನ್

Advertisement

Udayavani is now on Telegram. Click here to join our channel and stay updated with the latest news.

Next