Advertisement

ಚಾರ್‌ಧಾಮ್‌ ನಿರ್ವಹಣೆಗೆ ಟಿಟಿಡಿ ಅ.7ರಂದು ಒಪ್ಪಂದಕ್ಕೆ ಸಹಿ 

06:23 PM Oct 05, 2022 | Team Udayavani |

ಡೆಹರಾಡೂನ್‌: ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಮತ್ತು ಬದರೀ-ಕೇದಾರ ದೇವಸ್ಥಾನ ಸಮಿತಿಯ (ಬಿಕೆಟಿಸಿ) ನಡುವೆ ಅ.7ರಂದು ಒಪ್ಪಂದಕ್ಕೆ ಸಹಿ ಹಾಕಲಿವೆ.

Advertisement

ಬದರೀ, ಕೇದಾರನಾಥಗಳಲ್ಲಿ 6 ತಿಂಗಳಲ್ಲಿ ಏರ್ಪಡುವ ತೀವ್ರ ಜನಸಂದಣಿಯನ್ನು ನಿಭಾಯಿಸುವುದು, ಮೂಲಭೂತ ಸೌಕರ್ಯ, ಆರೋಗ್ಯ ವ್ಯವಸ್ಥೆಗಳನ್ನು ವೃದ್ಧಿಸುವುದಕ್ಕೆ ನೆರವು ನೀಡಲು ಟಿಟಿಡಿ ಈಗಾಗಲೇ ಔಪಚಾರಿಕ ಒಪ್ಪಿಗೆ ನೀಡಿದೆ.

ತಿರುಪತಿಗೆ ವರ್ಷಕ್ಕೆ ಕೋಟ್ಯಂತರ ಪ್ರವಾಸಿಗಳು ಭೇಟಿ ನೀಡುತ್ತಾರೆ. ಅದೇ ಕೇದಾರನಾಥದಲ್ಲಿ 6 ತಿಂಗಳು ಮಾತ್ರ ಪ್ರವಾಸಿಗಳಿಗೆ ಅವಕಾಶವಿರುತ್ತದೆ. ಆದರೆ ಎರಡೂ ಪ್ರದೇಶಗಳ ನಡುವಿನ ಭೌಗೋಳಿಕ ಸ್ಥಿತಿಯಲ್ಲಿ ಪೂರ್ಣ ವ್ಯತ್ಯಾಸವಿದೆ.

Advertisement

Udayavani is now on Telegram. Click here to join our channel and stay updated with the latest news.

Next