Advertisement

Char Dham Yatra: ಸೈಕಲ್ ಏರಿ ಚಾರ್ಧಾಮ್ ಯಾತ್ರೆ ಹೊರಟ ಬಿಹಾರದ ಯುವಕ…

12:49 PM Feb 21, 2024 | Team Udayavani |

ಪಣಜಿ: ಬಿಹಾರದ ಯುವಕನೊಬ್ಬ ಸೈಕಲ್ ಮೇಲೆ ಚಾರ್ಧಾಮ್ ಯಾತ್ರೆ ಮಾಡಲು ನಿರ್ಧರಿಸಿ ಗೋವಾದ ಬಿಚೋಲಿಗೆ ಬಂದು ತಲುಪಿದ್ದಾನೆ.

Advertisement

ಕರ್ನಾಟಕದ ಮೂಲಕ ಗೋವಾಕ್ಕೆ ಬಂದಿರುವುದಾಗಿ ತಿಳಿಸಿರುವ ಈತ, ಬಿಹಾರದ ಚಾಪ್ರಾ ಜಿಲ್ಲೆಯ ಈ ಯುವಕನ ಹೆಸರು ರೂಪೇಶ್ ರಾಜ್ ಠಾಕೂರ್.
ಕಳೆದ ವರ್ಷ ಆಗಸ್ಟ್ 28 ರಂದು ಬಿಹಾರದಿಂದ ಸೈಕಲ್ ಯಾತ್ರೆ ಆರಂಭಿಸಿದ್ದು, ಐದೂವರೆ ತಿಂಗಳಿಗೂ ಹೆಚ್ಚು ಕಾಲ ಸೈಕಲ್ ನಲ್ಲಿ ಸಂಚರಿಸುತ್ತಿದ್ದೇನೆ ಎಂದು ಈ ಯುವಕ ಹೇಳಿದ್ದಾನೆ.

ಮರಗಳನ್ನು ನೆಟ್ಟು ಜೀವನ ನಡೆಸು ಎಂಬ ಸಂದೇಶವಿರುವ ಬೋರ್ಡ್ ಕೂಡ ಸೈಕಲ್ ಮೇಲೆ ಅಳವಡಿಸಿದ್ದಾರೆ. ನನ್ನ ಸೈಕಲ್ ಪಯಣ ಸರಾಗವಾಗಿ ಸಾಗುತ್ತಿದೆ. ಇಲ್ಲಿಯವರೆಗೆ, ನಾನು ತಲುಪಿದ ಕ್ಷೇತ್ರಗಳಲ್ಲಿ ನನಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಎಲ್ಲರೂ ಪ್ರೀತಿಯಿಂದ ನನ್ನ ಬಗ್ಗೆ ವಿಚಾರಿಸುತ್ತಾರೆ. ಪ್ರಯಾಣದಲ್ಲಿ ಯಾವುದೇ ತೊಂದರೆ ಆಗಲಿಲ್ಲ ಎಂದು ರೂಪೇಶ್ ಹೇಳಿದ್ದಾರೆ.

ಜೀವನದಲ್ಲಿ ದೈವಭಕ್ತಿ ಅತ್ಯಗತ್ಯ
ಚಾರ್ಧಾಮ ಯಾತ್ರೆ ಒಂದು ಮಹಾ ಭಕ್ತಿ. ಜೀವನ ಸುಖಮಯವಾಗಿರಲು ಎಲ್ಲರೂ ದೇವರಿಗೆ ಮುಡಿಪಾಗಿರಿ ಎಂಬ ಸಂದೇಶವನ್ನು ರೂಪೇಶ್ ರಾಜ್ ಠಾಕೂರ್ ನೀಡಿದ್ದಾರೆ. ಚಾರ್ಧಾಮ್ ಯಾತ್ರೆ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳಾದರೂ ಬೇಕು ಎಂದು ಅವರು ಹೇಳಿದರು.

ಇದನ್ನೂ ಓದಿ: ಖಾಸಗಿ ಶಾಲೆಯಲ್ಲಿ ನಾಡಗೀತೆ ಕಡ್ಡಾಯವಲ್ಲ ಎಂಬ ವಿಚಾರಕ್ಕೆ ಶಿಕ್ಷಣ ಸಚಿವರು ಹೇಳಿದ್ದೇನು?

Advertisement
Advertisement

Udayavani is now on Telegram. Click here to join our channel and stay updated with the latest news.

Next