Advertisement

ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ

02:56 PM Apr 20, 2020 | Naveen |

ಚನ್ನಗಿರಿ: ದಿನಸಿ ಅಂಗಡಿಯೊಂದರಲ್ಲಿ ಗುಟಕಾ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಅಂಗಡಿ ಮೇಲೆ ತಹಶಿಲ್ದಾರ್‌ ಎ.ಜೆ. ನಾಗರಾಜ್‌ ಭಾನುವಾರ ದಾಳಿ ನಡೆಸಿದರು.

Advertisement

ಅಂಗಡಿ ಮಾಲೀಕರು ಹಲವು ಗೋಡೌನ್‌ಗಳನ್ನು ಹೊಂದಿದ್ದಾರೆ. ಗುಟಕಾ ದಾಸ್ತಾನು ಮಾಡಿದ್ದರೆ ಪುರಸಭೆ ಮತ್ತು ಪೊಲೀಸ್‌ ಇಲಾಖೆಯಿಂದ ಶೋಕಾಸ್‌ ನೋಟಿಸ್‌ ಜಾರಿಗೊಳಿಸಲಾಗುವುದು. ಪಟ್ಟಣದ ಇನ್ನೊಂದು ಅಂಗಡಿಯಲ್ಲಿ ಪರಿಶೀಲನೆ ಮಾಡಿದಾಗ ಅವಧಿ  ಮುಕ್ತಾಯವಾದ ತಂಪುಪಾನೀಯ ಬಾಟಲ್‌ಗ‌ಳು ಪತ್ತೆಯಾಗಿವೆ ಎಂದು ತಹಶೀಲ್ದಾರ್‌ ತಿಳಿಸಿದರು.

ಪುರಸಭೆ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಆರ್‌ಐ ಸಿದ್ಧರಾಮೇಶ್ವರ ಗೌಡ್ರು, ಆಹಾರ ಇಲಾಖೆಯ ರವಿಕುಮಾರ್‌ ಇದ್ದರು. ಅಂಗಡಿ ಮಾಲೀಕರು ಅಧಿಕಾರಿಗಳಿಗೆ ಪರವಾನಗಿ ತೋರಿಸಿಲ್ಲ ಎಂಬ ಮಾಹಿತಿ ಇದೆ. ಅವರು ಪರವಾನಗಿ ಪಡೆದಿದ್ದಾರೆಯೇ ಇಲ್ಲವೇ
ಎಂಬ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು.
ಬಸವರಾಜ್‌
ಪುರಸಭೆ ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next