Advertisement

ಚಂದ್ರಯಾನ-1ರ ಯೋಜನಾ ನಿರ್ದೇಶಕ ಶ್ರೀನಿವಾಸ ಹೆಗ್ಡೆ ನಿಧನ

12:01 AM Jun 15, 2024 | Team Udayavani |

ಬೆಂಗಳೂರು: ಇಸ್ರೋದ ನಿವೃತ್ತ ವಿಜ್ಞಾನಿ, ಚಂದ್ರಯಾನ-1ರ ಯೋಜನಾ ನಿರ್ದೇಶಕರಾಗಿದ್ದ ಶ್ರೀನಿವಾಸ ಹೆಗ್ಡೆ (71) ನಿಧನ ಹೊಂದಿದ್ದಾರೆ.

Advertisement

ಅವರು ಹಲವು ಸಮಯಗಳಿಂದ ಕಿಡ್ನಿ ಸಂಬಂಧಿತ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ತಡರಾತ್ರಿ ಏಕಾಏಕಿ ಹೃದಯಾಘಾತ ಉಂಟಾಯಿತು. ಅವರನ್ನು ಚಿಕಿತ್ಸೆಗಾಗಿ ಬೆಂಗಳೂರಿನ ಜಯನಗರದ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಕೊನೆಯುಸಿರೆಳೆದರು ಎಂದು ಕುಟುಂಬದ ಆಪ್ತರೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅವರ ನಿಧನಕ್ಕೆ ಶೋಕ ವ್ಯಕ್ತಪಡಿಸಿದ ಮಾಜಿ ವಿಜ್ಞಾನಿ ಎಂ. ಅಣ್ಣಾದೊರೈ 1982ರಲ್ಲಿ ಇಸ್ರೋಗೆ ಸೇರಿದ್ದ ವೇಳೆ ಹೆಗ್ಡೆಯವರು ನನಗೆ ಮಾರ್ಗದರ್ಶನ ಮಾಡಿದ್ದರು ಎಂದು ಹೇಳಿದ್ದಾರೆ. ಶ್ರೀನಿವಾಸ ಹೆಗ್ಡೆಯವರು 1978ರಿಂದ 2014ರ ವರೆಗೆ ಇಸ್ರೋದಲ್ಲಿ ಕಾರ್ಯ ನಿರ್ವಹಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next