Advertisement

ಚಂದ್ರಶೇಖರ ಗುರೂಜಿ ಹತ್ಯೆ: ಐದು ದಿನ ಹಿಂದೆಯೇ ಫೇಸ್‌ಬುಕ್‌ನಲ್ಲಿ ಸುಳಿವು ಕೊಟ್ಟಿದ್ದ ಆರೋಪಿ?

10:21 AM Jul 06, 2022 | Team Udayavani |

ಹುಬ್ಬಳ್ಳಿ: ಸರಳವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಕೊಲೆ ಪ್ರಕರಣದ ಆರೋಪಿ ಮಹಾಂತೇಶ ಶಿರೂರ ತನ್ನ ಫೇಸ್‌ ಬುಕ್‌ ಖಾತೆಯ ಪೋಸ್ಟ್‌ನಲ್ಲಿ ಸಂಭವಾಮಿ ಯುಗೇ ಯುಗೇ ಎಂಬ ಮಹಾಭಾರತದ ಶ್ರೀಕೃಷ್ಣನ ಸಂದೇಶ ಹಾಕಿಕೊಂಡಿದ್ದು, ಇದು ಗುರೂಜಿ ಹತ್ಯೆಯ ಬಗ್ಗೆ ಮೊದಲೇ ಸುಳಿವು ಕೊಟ್ಟಿದ್ದನೇ ಎಂಬ ಅನುಮಾನ ಮೂಡುತ್ತಿದೆ.

Advertisement

ಮಹಾಂತೇಶನು ಐದು ದಿನಗಳ ಹಿಂದೆ ತನ್ನ ಫೇಸ್‌ಬುಕ್‌ ಪೋಸ್ಟ್‌ನಲ್ಲಿ “ಅಧರ್ಮ ತಾಂಡವಾಡುತ್ತಿರುವಾಗ ದುಷ್ಟರನ್ನು ನಾಶ ಮಾಡಲು ಮತ್ತು ಧರ್ಮವನ್ನು ಪುನಃ ಸ್ಥಾಪಿಸಲು ನೀನುಬರುವುದಾಗಿ ವಚನ ನೀಡಿರುವೆ ಪ್ರಭು. ಇನ್ನೂ ವಿಳಂಬ ಏಕೆ ಭಗವಂತ? ಆದಷ್ಟು ಬೇಗ ಅವತರಿಸು ಪ್ರಭು! ಸಂಭವಾಮಿ ಯುಗೇ ಯುಗೇ’ ಅಂತ ಬರೆದ ಪೋಸ್ಟ್‌ ಹಂಚಿಕೊಂಡಿದ್ದ.

ಇದೀಗ ಚಂದ್ರಶೇಖರ ಗುರೂಜಿ ಹತ್ಯೆ ಆಗುತ್ತಿದ್ದಂತೆ ಆತ ಮಾಡಿದ್ದ ಫೇಸ್‌ಬುಕ್‌ ಪೋಸ್ಟ್‌ ವೈರಲ್‌ ಆಗಿದೆ. ಗುರೂಜಿ ಹತ್ಯೆಯು ಪೂರ್ವ ನಿಯೋಜಿತವಾಗಿತ್ತೆ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next