Advertisement

8 ಮಂದಿ ಸಾಧಕರಿಗೆ “ಚಂದನ’ಪ್ರಶಸ್ತಿ

10:48 PM Nov 08, 2019 | Lakshmi GovindaRaju |

ಬೆಂಗಳೂರು: ಬೆಂಗಳೂರು ದೂರದರ್ಶನ ಕೇಂದ್ರದಿಂದ ನೀಡುವ “ಚಂದನ ಪ್ರಶಸ್ತಿ’ಗೆ ಡಾ.ಜಿ.ಎನ್‌.ನಾಗಮಣಿ ಶ್ರೀನಾಥ್‌, ಎಂ.ಎಸ್‌.ನರಸಿಂಹಮೂರ್ತಿ ಸೇರಿ ಎಂಟು ಜನ ಸಾಧಕರು ಆಯ್ಕೆಯಾಗಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಡಾ.ಜಿ.ಎನ್‌.ನಾಗಮಣಿ ಶ್ರೀನಾಥ್‌, ನೃತ್ಯ ಕಲಾವಿದೆ ಶ್ರೀದೇವಿ ಉನ್ನಿ, ಕೃಷಿ ಸಾಧಕ ಹನುಮಂತಪ್ಪ ಭೀಮಪ್ಪ ಮಡೂರ್‌, ರಂಗ ಸಾಧಕ ಸಾಂಬಾಶಿವ ದಳವಾಯಿ, ಸಾಹಿತ್ಯ ಸಾಧಕ ಶಶಿಕಲಾ ವಸ್ತ್ರದ ಸಿಂದಗಿ, ಕಿರುತೆರೆ ನಿರ್ದೇಶಕ ಎಂ.ಎಸ್‌.ನರಸಿಂಹಮೂರ್ತಿ, ಕ್ರೀಡಾ ಸಾಧಕಿ ಎಸ್‌.ಸಬಿಯಾ, ಶಿಕ್ಷಣ ಸಾಧಕ ಶಿವಪ್ಪ ಕುಬೇರ, ಜಾನಪದ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪಾರವ್ವ ಲಚ್ಚಪ್ಪ ಲಮಾಣಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕ ರಾಜ್‌ಕುಮಾರ್‌, ಬೆಂಗಳೂರು ದೂರದರ್ಶನ ಕೇಂದ್ರದಿಂದ ನ.9ರಂದು ನಗರದಲ್ಲಿ “ಚಂದನ ಪ್ರಶಸ್ತಿ’ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಂಜೆ 6 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರಂಭ ನಡೆಯಲಿದ್ದು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಗಣ್ಯರನ್ನು ಗೌರವಿಸಲಾಗುವುದು ಎಂದರು. ಅತಿಥಿಗಳಾಗಿ ರಾಜ್ಯಪಾಲ ವಜುಭಾಯ್‌ ವಾಲಾ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಲೋಕಾಯುಕ್ತ ಪಿ.ವಿಶ್ವನಾಥ್‌ ಶೆಟ್ಟಿ, ಉಪ ಮುಖ್ಯಮಂತ್ರಿ ಸಿ.ಎನ್‌.ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next