Advertisement

ಉಪಚುನಾವಣೆ ಬಿಜೆಪಿ ವಿರುದ್ಧ ಕೋಪ, ತಾಪ ತೀರಿಸಿಕೊಳ್ಳಲು ಅವಕಾಶ: ಡಿಕೆಶಿ

08:39 PM Oct 14, 2021 | Team Udayavani |

ಚಿತ್ರದುರ್ಗ: ‘ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಬಿಜೆಪಿ ಸರಕಾರದ ವಿರುದ್ಧ ಜನರಿಗೆ ಕೋಪ, ತಾಪ ತೀರಿಸಿಕೊಳ್ಳಲು ಅವಕಾಶ ನೀಡಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗುರುವಾರ ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಯುವಕರು, ರೈತರು, ವರ್ತಕರಿಗೆ ಬಿಜೆಪಿ ಆಡಳಿತದಲ್ಲಿ ಅನ್ಯಾಯ ಆಗಿದೆ. ಬಿಜೆಪಿಯ ಜನವಿರೋಧಿ ನೀತಿಯಿಂದ ಜನ ಭ್ರಮನಿರಸನಗೊಂಡಿದ್ದಾರೆ. ಬೆಲೆ ಏರಿಕೆ, ಪೆಟ್ರೋಲ್, ಡೀಸೆಲೆ ದರ ಗಗನಕ್ಕೇರಿದೆ.ಹೊಸ ಸಿಎಂ ಬಂದ ಬಳಿಕವೂ ಏನೂ ಬದಲಾವಣೆ ಆಗಿಲ್ಲ’ ಎಂದರು. ಎರಡೂ ಕಡೆ ಕಾಂಗ್ರೆಸ್ ಗೆಲ್ಲುವ ವಿಶ್ವಾಸ‌ ವ್ಯಕ್ತಪಡಿಸಿದರು.

‘ಸಿದ್ಧರಾಮಯ್ಯಗೆ ಉಪಚುನಾವಣೆ ಗೆಲುವು ಬೇಕಿಲ್ಲ’ ಎಂದ ಸಚಿವ ಶ್ರೀರಾಮುಲು ಅವರಿಗೆ ತಿರುಗೇಟು ನೀಡಿ, ‘ಯಾರೋ ಕೆಲವರು ಮನಸ್ವೇಚ್ಛೆಯಿಂದ ತಲೆ ಕೆಟ್ಟ ಹಾಗೆ ಮಾತಾಡುತ್ತಾರೆ’ ಎಂದರು.

ಕಾಂಗ್ರೆಸ್ಸಿನ ಒಳಜಗಳದ ಬಗ್ಗೆ ಕೇಳಿದ ಪ್ರಶ್ನೆಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸದೆ ಹೊರಟರು.

Advertisement

Udayavani is now on Telegram. Click here to join our channel and stay updated with the latest news.

Next