Advertisement

ಚಾಮರಾಜೇಶ್ವರ ರಥಕ್ಕೆ ಬೆಂಕಿ:ಶಂಕಿತ ಆರೋಪಿ ಸೆರೆ 

11:09 AM Feb 23, 2017 | Team Udayavani |

ಚಾಮರಾಜನಗರ: ನಗರದ ಐತಿಹಾಸಿಕ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿಲ್ಲಿಸಿದ್ದ ಚಾಮರಾಜೇಶ್ವರ ರಥಕ್ಕೆ ಬೆಂಕಿ ಹಚ್ಚಿದ ಆರೋಪಿಯನ್ನು ಪೊಲೀಸರು  ಬುಧವಾರ ತಡರಾತ್ರಿ ಬಂಧಿಸಿದ್ದಾರೆ. 

Advertisement

ಬಂಧಿತ ಆರೋಪಿ ಕುಮಾರ್‌ (30) ಎಂಬಾತನಾಗಿದ್ದು ಈತನಿಗೆ ಬೆಂಕಿ ಹಚ್ಚುವ ವಿಕೃತ ಗೀಳಿದೆ  ಎಂದು ಹೇಳಲಾಗಿದೆ. ಈ ಹಿಂದೆ ಆದಿಶಕ್ತಿ ಗೋದಾಮಿಗೆ ಬೆಂಕಿ ಹಚ್ಚಿದ್ದು, ಇನ್ನೊಂದು ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನಿಗೆ ಮಾನಸಿಕ ಸಮಸ್ಯೆ ಇದೆ ಎನ್ನಲಾಗಿದೆ. 

ಫೆಬ್ರವರಿ 18 ರಂದು ತಡರಾತ್ರಿ ಬೆಂಕಿ ಹಚ್ಚಿದ್ದ ದೃಶ್ಯವಾಳಿಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದ್ದವು. ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. 

ಬೆಂಕಿ ಹಚ್ಚಿರುವುದು ಕಂಡು ಬಂದ ಬಳಿಕ ಭಕ್ತರು ವ್ಯಾಪಕ ಆಕ್ರೋಶ ವ್ಯಕ್ತ ಪಡಿಸಿ ಕೂಡಲೇ ಆರೋಪಿಗಳನ್ನು ಬಂಧಿಸಲು ಒತ್ತಾಯಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next