Advertisement

Chamarajanagar: ಹಸೆಮಣೆಯಿಂದ ಮತಗಟ್ಟೆಗೆ ಬಂದ ನವ ವಧೂವರರು!

09:30 PM May 10, 2023 | Team Udayavani |

ಚಾಮರಾಜನಗರ: ಹಸೆಮಣೆಯೇರಿದ ನವ ವಧೂವರರು ಮದುವೆಯ ಉಡುಗೆಯಲ್ಲೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ ಪ್ರಸಂಗ ತಾಲೂಕಿನ ಮೇಲಾಜಿಪುರದಲ್ಲಿ ನಡೆಯಿತು.

Advertisement

ತಾಲೂಕಿನ ಮೇಲಾಜಿಪುರದ ಮಾದಲಾಂಬಿಕಾ (ಪುಟ್ಟಿ) ಹಾಗೂ ನಂಜನಗೂಡು ತಾಲೂಕಿನ ಕಾರೇಪುರದ ಕೆ.ಎಸ್. ಮಂಜುನಾಥ್ ಅವರ ವಿವಾಹ ಬುಧವಾರ ತಾಲೂಕಿನ ಪಣ್ಯದಹುಂಡಿಯ ಕಲ್ಯಾಣಮಂಟಪದಲ್ಲಿ ನಡೆಯಿತು. ಹಸೆಮಣೆಯೇರಿದರೂ ಮತದಾನದ ಕರ್ತವ್ಯ ಮರೆಯದ ನವ ವಧೂವರರು ಮದುವೆಯಾದ ಬಳಿಕ ಮೇಲಾಜಿಪುರದ ಮತಗಟ್ಟೆಗೆ ಆಗಮಿಸಿದರು. ವಧು ಮಾದಲಾಂಬಿಕೆಯ ಮತ ಈ ಮತಗಟ್ಟೆಯಲ್ಲಿತ್ತು. ವಧು ಇಲ್ಲಿ ಮತ ಚಲಾಯಿಸಿದರು. ವರ ಮಂಜುನಾಥ್ ಅವರ ಮತ ನಂಜನಗೂಡು ತಾಲೂಕು ಕಾರೇಪುರದಲ್ಲಿತ್ತು. ನವವಧೂವರರು ಮತ್ತೆ ಕಾರನ್ನೇರಿ ಕಾರೇಪುರಕ್ಕೆ ತೆರಳಿದರು. ಅಲ್ಲಿ ಮಂಜುನಾಥ್ ಮತ ಚಲಾಯಿಸಿದರು! ಮದುವೆಯ ಸಂಭ್ರಮದಲ್ಲೂ ಮತದಾನ ಮರೆಯದ ಈ ನವದಂಪತಿ ಮತದ ಮೌಲ್ಯವನ್ನು ಸಾರಿ ಮಾದರಿಯಾಗಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next