Advertisement

Challenge; ಮತ್ತೊಂದು ಮದುವೆ ಆಗೋದಿದ್ರೆ ಈಗ್ಲೇ ಆಗಿ:ಬದ್ರುದ್ಧೀನ್‌ ಗೆ ಹಿಮಂತ

11:51 PM Mar 31, 2024 | Team Udayavani |

ದಿಸ್ಪುರ್‌: “ಮನಸು ಮಾಡಿದ್ರೆ ಮತ್ತೊಂದು ಮದುವೆ ಆಗಬಲ್ಲೆ’ ಎಂಬ ಎಐಯುಡಿಎಫ್ ಪಕ್ಷದ ಮುಖ್ಯಸ್ಥ ಬದ್ರುದ್ಧೀನ್‌ ಅಜ್ಮಲ್‌ ಅವರಿಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯೆ ನೀಡಿದ್ದು, “ಆಗುವುದಿದ್ದರೆ ಈಗಲೇ ಆಗಿಬಿಡಿ. ಲೋಕಸಭೆ ಚುನಾವಣೆ ಅನಂತರ ಮದುವೆಯಾದರೆ ಜೈಲು ಸೇರಬೇಕಾಗುತ್ತದೆ’ ಎಂದಿದ್ದಾರೆ.

Advertisement

ಧುಬ್ರಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಜ್ಮಲ್‌ ಇತ್ತೀಚೆಗಷ್ಟೇ ಸಭೆಯೊಂದ ರಲ್ಲಿ ಮಾತನಾಡುತ್ತಾ, “ಕಾಂಗ್ರೆಸ್‌ ಮತ್ತು ರಖೀಬುಲ್‌ ಹುಸೇನ್‌(ಎದುರಾಳಿ ಅಭ್ಯರ್ಥಿ) ನನಗೆ ವಯಸ್ಸಾಗಿದೆ ಎಂದು ಭಾವಿಸಿದ್ದಾರೆ. ಆದರೆ ನಾನು ಈಗಲೂ ಶಕ್ತನಾಗಿದ್ದು ಬೇಕಿದ್ದರೆ ಮತ್ತೊಂದು ಮದುವೆಯನ್ನೂ ಆಗಬಲ್ಲೆ! ಖುದ್ದು ರಾಜ್ಯದ ಮುಖ್ಯಮಂತ್ರಿ ಬೇಡ ವೆಂದರೂ ನಾನು ಮದುವೆಯಾಗಬಲ್ಲೆ!’ ಎಂದಿದ್ದರು. ಅದಕ್ಕೆ ಸಿಎಂ ಹಿಮಂತ ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next