Advertisement

ಭಗೀರಥ ಮಹರ್ಷಿ ತತ್ವಾದರ್ಶ ಪಾಲಿಸಿ

06:13 PM May 01, 2020 | Naveen |

ಚಳ್ಳಕೆರೆ: ಸಮಾಜದಲ್ಲಿ ಅಡಗಿದ್ದ ಕಂದಾಚಾರ ನಿರ್ಮೂಲನೆಗೆ ನಿವಾರಿಸಲು ಭಗೀರಥ ಮಹರ್ಷಿಗಳು ಶ್ರಮಿಸಿ ಧಾರ್ಮಿಕ ಜಾಗೃತಿ ಮೂಡಿಸಿದರು. ನಾವೆಲ್ಲರೂ ಅವರ ತತ್ವಾದರ್ಶಗಳನ್ನು ರೂಢಿಸಿಕೊಂಡಲ್ಲಿ ಬದುಕು ಪಾವನವಾಗುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.

Advertisement

ತಾಲೂಕು ಕಚೇರಿ ಮತ್ತು ಶಾಸಕರ ಕಾರ್ಯಾಲಯದಲ್ಲಿ ಗುರುವಾರ ನಡೆದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಭಗೀರಥ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು. ಕೋವಿಡ್ ವೈರಾಣು ಹಿನ್ನೆಲೆಯಲ್ಲಿ ರಾಜ್ಯದ ಜನರನ್ನು ಜಾಗೃತಗೊಳಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲೂ ಈ ಮಹಾನ್‌ ಮಹರ್ಷಿಯ ಸಾಧನೆಯನ್ನು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿರುವುದು ಸ್ತುತ್ಯರ್ಹ ಎಂದರು. ತಹಶೀಲ್ದಾರ್‌ ಎಂ. ಮಲ್ಲಿಕಾರ್ಜುನ್‌, ಬಿಇಒ ವೆಂಕಟೇಶಪ್ಪ, ತಾಪಂ ಇಒ ಡಾ| ಶ್ರೀಧರ್‌ ಐ. ಬಾರಕೇರ್‌, ಪೌರಾಯುಕ್ತ ಪಿ. ಪಾಲಯ್ಯ, ಉಪ್ಪಾರ ಸಂಘದ ಅಧ್ಯಕ್ಷ ಎಸ್‌. ಯಲ್ಲಪ್ಪ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next