Advertisement

ನಡ್ಡಾ, ಮೋದಿ ‌ನೇತೃತ್ವದಲ್ಲಿ ಅಂಬೇಡ್ಕರ್ ಗೆ ಗೌರವ ಸಿಗುತ್ತಿದೆ: ಛಲವಾದಿ ನಾರಾಯಣಸ್ವಾಮಿ

03:51 PM Dec 06, 2021 | Team Udayavani |

ಬೆಂಗಳೂರು: ಕಾಂಗ್ರೆಸ್ ಆಡಳಿತದಲ್ಲಿ ಅಂಬೇಡ್ಕರ್ ಗೆ ಅವಮಾನ ಮಾಡಿದ್ದರು. ಕಾಂಗ್ರೆಸ್ ದಲಿತರನ್ನು ವೋಟ್ ಬ್ಯಾಂಕ್ ಮಾಡಿಕೊಂಡಿದೆ. ಕಾಂಗ್ರೆಸ್ ನಲ್ಲಿ‌ ದಲಿತರಿಗೆ ಗೌರವವಿಲ್ಲ. ಜೆಪಿ ನಡ್ಡಾ, ನರೇಂದ್ರ ಮೋದಿ ‌ನೇತೃತ್ವದಲ್ಲಿ ಅಂಬೇಡ್ಕರ್ ಅವರಿಗೆ ಗೌರವ ಸಿಗುತ್ತಿದೆ ಎಂದು ಬಿಜೆಪಿ ವಕ್ತಾರ ಛಲವಾದಿ ನಾರಾಯಣಸ್ವಾಮಿ ಹೇಳಿದರು.

Advertisement

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, 65 ವರ್ಷ ಕಳೆದು ಹೋಗಿದೆ. ಕೆಳ‌ ಸಮುದಾಯದ ಸಿಂಹ ಗರ್ಜನೆ ಅಂಬೇಡ್ಕರ್ ಕಳೆದುಕೊಂಡ ನಮಗೆ ಅಂಬೇಡ್ಕರ್ ರೀತಿಯ ಶಕ್ತಿ ಭಾರತದಲ್ಲಿ ಮತ್ತೆ ಹುಟ್ಟುತ್ತದೆ ಎಂಬ ಭರವಸೆ ಇಲ್ಲ. ದೇಶದಲ್ಲಿ ಇದ್ದಂತಹ ಅಸ್ಪ್ರಶ್ಯತೆ, ಸಮಾನತೆ ಸೇರಿದಂತೆ ಅನೇಕ ವಿಚಾರದಲ್ಲಿ ಧ್ವನಿ ಎತ್ತಿದ್ದು ಅಂಬೇಡ್ಕರ್. ಇಂದು‌ ಜ್ಯೋತಿ ಇಲ್ಲದೇ ನಮಗೆ ಸೂರ್ಯನ ರೀತಿಯಲ್ಲಿ ಬೆಳಕಾಗಿದ್ದಾರೆ. ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಿದ್ದೇವೆ ಎಂದರು.

ಸಂವಿಧಾನ ಗೌರವಿಸುವ ಕೆಲಸ ಮಾಡುತ್ತಿದ್ದೇವೆ. ನವೆಂಬರ್ 26ರಂದು ಸಂವಿಧಾನ ದಿನಾಚರಣೆ ‌ಮಾಡುತ್ತಿದ್ದೇವೆ. ಮೋದಿ ಅಧಿಕಾರಕ್ಕೂ‌ ಮೊದಲು ಕಾನೂನು ದಿನಾಚರಣೆ ಅಂತ ಆಚರಣೆ ಮಾಡುತ್ತಿದ್ದೇವು. ಈಗ ಅಂಬೇಡ್ಕರ್ ಹಾಗೂ ಸಂವಿಧಾನಕ್ಕೆ ಗೌರವ ಸಿಗುವ ಸಲುವಾಗಿ ಸಂವಿಧಾನ ದಿನಾಚರಣೆ ಮಾಡುತ್ತಿದ್ದೇವೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next