Advertisement

ಡ್ರಾಪ್‌ ಕೇಳುವ ನೆಪದಲ್ಲಿ ತಬ್ಬಿಕೊಂಡು ಸರ ಕಳವು ಮಾಡುತ್ತಿದ್ದ ತೃತೀಯ ಲಿಂಗಿ ಬಂಧನ

02:38 PM Jul 12, 2022 | Team Udayavani |

ಬೆಂಗಳೂರು: ಡ್ರಾಪ್‌ ಕೇಳುವ ನೆಪದಲ್ಲಿ ಯುವಕರನ್ನು ಗುರಿಯಾಗಿಸಿಕೊಂಡು ತಬ್ಬಿಕೊಂಡು ಚಿನ್ನದ ಸರ ಕಳವು ಮಾಡುತ್ತಿದ್ದ ತೃತೀಯ ಲಿಂಗಿಯೊಬ್ಬರನ್ನು ಕಬ್ಬನ್‌ ಪಾರ್ಕ್‌ ಪೊಲೀಸರು ಬಂಧಿಸಿದ್ದಾರೆ.

Advertisement

ಜ್ಯೂಲಿ ಅಲಿಯಾಸ್‌ ಕೃಷ್ಣ ಬಂಧಿತ ತೃತೀಯ ಲಿಂಗಿ. ಅವರಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಕೆಲ ದಿನಗಳ ಹಿಂದೆ ಉದ್ಯಮಿಯೊಬ್ಬರು ಸ್ನೇಹಿತರ ಜತೆ ಜು.5ರಂದು ರಾತ್ರಿ ಬ್ರಿಗೇಡ್‌ ರಸ್ತೆಗೆ ಬಂದಿದ್ದರು. ರೆಸ್ಟೋರೆಂಟ್‌ನಲ್ಲಿ ಊಟ ಮುಗಿಸಿಕೊಂಡು ರಾತ್ರಿ 11ಗಂಟೆ ಸುಮಾರಿಗೆ ಕಾರುತೆಗೆದುಕೊಂಡು ಹೋಗಲು ಬಂದಿದ್ದಾರೆ. ಸ್ಥಳದಲ್ಲಿದ್ದ ಆರೋಪಿ, ಡ್ರಾಫ್ ಕೇಳುವ ನೆಪದಲ್ಲಿ ಉದ್ಯಮಿಯೊಬ್ಬರನ್ನು ತಬ್ಬಿಕೊಂಡು ಕೊರಳಲ್ಲಿದ್ದ ಚಿನ್ನದ ಸರ ಬಿಚ್ಚಿಕೊಂಡು ಸ್ಥಳದಿಂದ ಪರಾರಿಯಾಗಿದ್ದರು. ಕೆಲ ಹೊತ್ತಿನ ಬಳಿಕ ಕೊರಳು ನೋಡಿಕೊಂಡು ಚಿನ್ನದ ಸರ ಕಳುವಾಗಿರುವುದು ಗೊತ್ತಾಗಿದೆ. ತಬ್ಬಿಕೊಂಡ ವ್ಯಕ್ತಿಯೇ ಕೃತ್ಯ ಎಸಗಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದರು.

ಸಿಸಿ ಕ್ಯಾಮೆರಾ ದೃಶ್ಯ ಹಾಗೂ ಇತರೆ ಸಾಕ್ಷ್ಯ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಫೆಬ್ರವರಿ, ಜುಲೈ ಮೊದಲ ವಾರದಲ್ಲಿ ಇದೇ ರೀತಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next