Advertisement

ಬಸ್ ನಿಲ್ದಾಣದಲ್ಲಿ ಮಹಿಳೆಯ ಮಾಂಗಲ್ಯ ಎಗರಿಸಿದ ಕಳ್ಳ

10:15 AM Sep 03, 2021 | Team Udayavani |

ವಿಜಯಪುರ: ನಿಲ್ದಾಣದಲ್ಲಿ ಬಸ್ ಗಾಗಿ ಕಾಯಿತ್ತ ಕುಳಿತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಕಳ್ಳನೊಬ್ಬ ಎಗರಿಸಿದ ಘಟನೆ ಜಿಲ್ಲೆಯಲ್ಲಿ ಜರುಗಿದೆ.  ಮಾಂಗಲ್ಯ ಕಳ್ಳತನದ ದೃಶ್ಯ ಸಿಸಿ ಕೆಮೆರಾದಲ್ಲಿ ಸೆರೆಯಾಗಿದೆ.

Advertisement

ತಾಳಿಕೋಟೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೆಪ್ಟೆಂಬರ್ 1 ರಂದು ಘಟನೆ ನಡೆದಿದೆ.

ರೇಣುಕಾ ಪಾಟೀಲ ಎಂಬುವವರ 38 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನೋರ್ವ ಎಗರಿಸಿದ್ದಾನೆ. ತಾಳಿಕೋಟೆ ಪಟ್ಟಣದಿಂದ ಯಾದಗಿರಿ ಜಿಲ್ಲೆಯ ದೋರಹಳ್ಳಿಗೆ ತೆರಳಲು ರೇಣುಕಾ ಬಸ್ ಗಾಗಿ ಕಾಯುತ್ತಿದ್ದರು.

ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ: 533 ಮತಗಟ್ಟೆಗಳಲ್ಲಿ ಮತದಾನ ಶುರು

ಈ ವೇಳೆ ನಿಲ್ದಾಣದಲ್ಲಿ ಮಹಿಳೆ ಪಕ್ಕದಲ್ಲೇ ಹೊಂಚು ಹಾಕಿ ನಿಂತಿದ್ದ ಕಳ್ಳ, ಮಾಂಗಲ್ಯ ಸರ ಕಿತ್ತುಕೊಂಡು ಓಡಿ ಹೋಗಿದ್ದಾನೆ. ಈ ದೃಶ್ಯ ನಿಲ್ದಾಣದಲ್ಲಿಯ ಸಿ.ಸಿ. ಕೆಮೆರಾದಲ್ಲಿ ಸೆರೆಯಾಗಿದೆ.

Advertisement

ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next