Advertisement

ಸಿಇಟಿ: ದಾಖಲಾತಿ ಪರಿಶೀಲನೆಗೆ ಅವಕಾಶ ನೀಡಿದ ಕೆಇಎ

09:23 PM Sep 10, 2022 | Team Udayavani |

ಬೆಂಗಳೂರು: ಸಿಇಟಿ-2022ನೇ ಸಾಲಿನ ಅಭ್ಯರ್ಥಿಗಳು ಸಲ್ಲಿಸಿರುವ ವ್ಯಾಸಂಗ ಪತ್ರಗಳಲ್ಲಿ ವ್ಯತ್ಯಾಸವಿದ್ದರೆ ಸರಿಪಡಿಸಿಕೊಳ್ಳಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಮತ್ತೊಂದು ಅವಕಾಶ ನೀಡಿದೆ.

Advertisement

ಸೆ.12 ಮತ್ತು 13ರಂದು ಸಂಬಂಧಪಟ್ಟ ಬಿಇಒ ಕಚೇರಿಗಳಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ. ಕೆಲವು ಅಭ್ಯರ್ಥಿಗಳು ಪರಿಶೀಲನೆಗೆ ಒಳಪಡಿಸಿದಾಗ ವ್ಯಾಸಂಗ ಪ್ರಮಾಣ ಪತ್ರ ಅಥವಾ ಕನ್ನಡ ಮಾಧ್ಯಮ ವ್ಯಾಸಂಗ ಪ್ರಮಾಣ ಪತ್ರ ಅಥವಾ ಗ್ರಾಮೀಣ ಪ್ರದೇಶ ವ್ಯಾಸಂಗ ಪ್ರಮಾಣ ಪತ್ರಗಳಲ್ಲಿ ವ್ಯತ್ಯಾಸವಿದೆ. ಅಂತಹ ಅಭ್ಯರ್ಥಿಗಳು ಅವಶ್ಯವಿದ್ದಲ್ಲಿ ಮತ್ತೊಮ್ಮೆ ಬಿಇಒ ಕಚೇರಿಗಳಿಗೆ ತೆರಳಿ ಸರಿಪಡಿಸಿಕೊಳ್ಳಬಹುದು ಎಂದು ತಿಳಿಸಿದೆ.

ಉದಾ: ಅಭ್ಯರ್ಥಿಯು 1ರಿಂದ 4 ನೇ ತರಗತಿವರೆಗೆ ಒಂದು ಶಾಲೆಯಲ್ಲಿ ವ್ಯಾಸಂಗ ಮಾಡಿರುವುದಾಗಿ ಅರ್ಜಿಯಲ್ಲಿ ನಮೂದಿಸಿದ್ದು, ಆದರೆ ಬಿಇಓ ಕಚೇರಿಯಲ್ಲಿ 1 ರಿಂದ 3 ರವರೆಗೆ ಮಾತ್ರ ಪರಿಶೀಲಿಸಲಾಗಿದೆ. ಕಾರಣ 4 ನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ಶಾಲೆ ಬೇರೆಯಾಗಿದ್ದು, ಆ ಬಿಇಒ ಅಧಿಕಾರ ವ್ಯಾಪ್ತಿಗೆ ಬಂದಿರುವುದಿಲ್ಲ. ಹೀಗಾಗಿ ಸಂಬಂಧ ಪಟ್ಟ ಬಿಇಒ ಕಚೇರಿಗೆ ತೆರಳಿ ಪತ್ರಗಳನ್ನು ಪಡೆದುಕೊಳ್ಳಲು ಕೆಇಎ ಸೂಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next