Advertisement

Cancer: ಗರ್ಭಕಂಠ ಕ್ಯಾನ್ಸರ್‌ ಮುಕ್ತ ಕರ್ನಾಟಕ ಗುರಿ: ಸಚಿವ ದಿನೇಶ್‌ ಗುಂಡೂರಾವ್‌

11:29 PM Oct 07, 2023 | Team Udayavani |

ಬೆಂಗಳೂರು: ಗರ್ಭಕಂಠದ ಕ್ಯಾನ್ಸರ್‌ ಮುಕ್ತ ಕರ್ನಾಟಕ ನಿರ್ಮಾಣ ಆರೋಗ್ಯ ಇಲಾಖೆಯ ಗುರಿಯಾಗಿದೆ. ಪರಿಣಾಮಕಾರಿ ಸ್ಕ್ರೀನಿಂಗ್‌, ವ್ಯಾಕ್ಸಿನೇಷನ್‌ ಮತ್ತು ಆರಂಭಿಕ ಹಂತದ ಚಿಕಿತ್ಸೆ ನಿರ್ಣಾಯಕ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದರು.

Advertisement

ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಎಫ್ಐಎನ್‌ಡಿ ಶುಕ್ರವಾರ ನಗರದ ಹೊಟೇಲ್‌ನಲ್ಲಿ ಆಯೋಜಿಸಿದ್ದ ಕರ್ನಾಟಕದಲ್ಲಿ ಗರ್ಭಕಂಠ ಕ್ಯಾನ್ಸರ್‌ ಸ್ಕ್ರೀನಿಂಗ್‌ ಬಲಪಡಿಸುವ ಕುರಿತು ರಾಜ್ಯ ಮಟ್ಟದ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಗರ್ಭಕಂಠ ಕ್ಯಾನ್ಸರ್‌ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಆರೋಗ್ಯ ಇಲಾಖೆಯು ಪ್ರಾರಂಭಿಕ ಹಂತದಲ್ಲಿಯೇ ಅದನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ. ಜತೆಗೆ ಇದರಿಂದ ಮುಕ್ತಿ ಪಡೆಯಲು ಅಗತ್ಯವಿರುವ ಮಾರ್ಗಸೂಚಿ ರಚಿಸಲು ಆರೋಗ್ಯ ಇಲಾಖೆ ಬದ್ಧವಾಗಿದೆ ಎಂದು ವಿವರಿಸಿದರು. ಆಕ್ಸೆಸ್‌ ಎಫ್ಐಎನ್‌ಡಿನ ಉಪಾಧ್ಯಕ್ಷ ಡಾ| ಸಂಜಯ್‌ ಸರಿನ್‌ ಮಾತನಾಡಿ, ಎಫ್ಐಎನ್‌ಡಿ ಎಚ್‌ಪಿವಿಯು ಸ್ಕ್ರೀನಿಂಗ್‌ ಮೂಲಕ ಕ್ಯಾನ್ಸರ್‌ ಪತ್ತೆ ಹಚ್ಚಲು ಮುಂದಾಗಿದ್ದು, ಆ ಮೂಲಕ ಡಬ್ಲೂéಎಚ್‌ಒನ ಗರ್ಭಕಂಠದ ಕ್ಯಾನ್ಸರ್‌ ನಿರ್ಮೂಲನೆ ಗುರಿ ಸಾಧಿಸಲು ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next