Advertisement

ಜಡ್ಜ್ಗಳ ಮೌಲ್ಯಮಾಪನ ಕೈಬಿಡುವುದಕ್ಕೆ ಕೇಂದ್ರ ಆಕ್ಷೇಪ

07:25 AM Oct 23, 2017 | Team Udayavani |

ಹೊಸದಿಲ್ಲಿ:  ಹೆಚ್ಚುವರಿ ನ್ಯಾಯಮೂರ್ತಿಗಳನ್ನು ಕಾಯಂ ಹುದ್ದೆಗೆ ಪರಿಣಿಸುವಾಗ ಅವರ ಮೌಲ್ಯಮಾಪನ ನಡೆಸುವ ವಿಧಾನವನ್ನು ಕೈಬಿಡುವ ಕೊಲಿಜಿಯಂ ನಿರ್ಧಾರಕ್ಕೆ ಕೇಂದ್ರಸರಕಾರ ಆಕ್ಷೇಪ ವ್ಯಕ್ತಪಡಿಸಿದೆ. ಇದು ಸುಪ್ರೀಂಕೋರ್ಟ್‌ ಕೊಲಿಜಿಯಂ ಮತ್ತು ಕೇಂದ್ರಸರಕಾರದ ಮಧ್ಯೆ ಮತ್ತೂಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆಯಿದೆ. ಕೊಲಿಜಿಯಂನ ಈ ನಿರ್ಧಾರದ ಬಗ್ಗೆ ತನ್ನ ಆಕ್ಷೇಪವನ್ನು ಕೇಂದ್ರ ಸರಕಾರ ಈಗಾಗಲೇ ವಿವರಿಸಿದ್ದು, ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸೂಚಿಸಿತ್ತು.

Advertisement

ಕಾಯಂ ಹುದ್ದೆಗೆ ಹೆಚ್ಚುವರಿ ನ್ಯಾಯಮೂರ್ತಿಗಳ ಹೆಸರನ್ನು ಶಿಫಾರಸು ಮಾಡುವ ಮುನ್ನ ನ್ಯಾಯಾಂಗ ಸಾಧನೆ ಮೌಲ್ಯಮಾಪನ ನಡೆಸುವ ಪ್ರಕ್ರಿಯೆಯನ್ನು ಕೈಬಿಡುವ ನಿರ್ಧಾರವನ್ನು ಮಾರ್ಚ್‌ನಲ್ಲಿ ಆಗಿನ ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೆಹರ್‌  ಪ್ರಕಟಿಸಿದ್ದರು. 1981ರ ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಜೆಐ ಹೇಳಿದ್ದರು. ಮೌಲ್ಯಮಾಪನ ನಡೆಸುವುದಕ್ಕಾಗಿ 2010 ಅಕ್ಟೋಬರ್‌ನಲ್ಲಿ ಸಿಜೆಐ ಆಗಿದ್ದ ಎಸ್‌ ಎಚ್‌ ಕಪಾಡಿಯಾ ಆದೇಶಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next