Advertisement

ಕೇಂದ್ರದ ಸಾಧನೆ ಮನೆ-ಮನೆಗೆ ತಲುಪಿಸಿ: ಜಾಧವ್‌

01:27 PM Nov 16, 2021 | Team Udayavani |

ಸುರಪುರ: ಕೇಂದ್ರ ಸರಕಾರಿಂದ ಒಳ್ಳೆಯ ಕಾರ್ಯಕ್ರಮಗಳು ಇಂದು ಸಿಗುತ್ತಿವೆ. ಆತ್ಮ ನಿರ್ಭರ ಪ್ರಧಾನಿ ನರೇಂದ್ರ ಮೋದಿಜೀಯವರ ಮಹತ್ವಕಾಂಕ್ಷಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರದ ಜನಪರ ಯೋಜನೆ ಮತ್ತು ಸಾಧನೆಗಳನ್ನು ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಜನರ ಮನೆ-ಮನೆಗೆ ಹೋಗಿ ತಿಳಿಸಬೇಕು ಎಂದು ಸಂಸದ ಡಾ| ಉಮೇಶ ಜಾಧವ್‌ ಹೇಳಿದರು.

Advertisement

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಅವರು ಮಾತನಾಡಿ, ಕೊರೊನಾದಲ್ಲಿ ಪ್ರತಿಯೊಬ್ಬ ಕಾರ್ಮಿಕ ಮತ್ತು ರೈತರ ಖಾತೆಗೆ ಹಣ ಹಾಕಿ ನೆರವು ನೀಡಿದೆ ರೈತಪರ ಕಾಳಜಿಯೊಂದಿಗೆ ಎಲ್ಲ ಜಾತಿ, ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುವ ಏಕೈಕ ಪಕ್ಷವಾಗಿದೆ. ಕೊರೊನಾ ಸಂದರ್ಭದಲ್ಲಿ ಶಾಸಕ ರಾಜುಗೌಡ ವಿವಿಧ ರಾಜ್ಯ ಮತ್ತು ನಗರ ಪ್ರದೇಶಗಳಲ್ಲಿದ್ದ ಕಾರ್ಮಿಕರಿಗೆ ವೈಯಕ್ತಿಕವಾಗಿ ಬಸ್‌ ಮಾಡಿ ಊರಿಗೆ ಕರೆ ತಂದಿದ್ದಾರೆ. ಇದನ್ನು ಮರೆಯಲು ಸಾಧ್ಯವಿಲ್ಲ. ಇದು ಮಾನವೀಯತೆ ಮತ್ತು ಪುಣ್ಯದ ಕೆಲಸವಾಗಿದೆ ಎಂದರು.

ಶಾಸಕ ರಾಜೂಗೌಡ ಮಾತನಾಡಿ, ಪಕ್ಷದ ಸಂಘಟನೆ ಜವಾಬ್ದಾರಿ ಪದಾಧಿಕಾರಿಗಳಿಗೆ ನೀಡಲಾಗಿದೆ. ಜನರೊಂದಿಗೆ ಬೆರತು ಪಕ್ಷವನ್ನು ಭೂತಮಟ್ಟದಲ್ಲಿ ಸದೃಢಗೊಳಿಸಬೇಕು. ಕೋವಿಡ್‌ದಲ್ಲಿ ಸಂಘ ಪರಿವಾರದವರು ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದಾರೆ. ಅವರನ್ನು ದೂರುವ ಕಾಂಗ್ರೆಸ್‌ಗರೆ ನಿಮ್ಮ ಕೊಡುಗೆ ಏನು? ಒಂದು ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯ ಮಾಡುವು ದೇ ನಿಮ್ಮ ಕಾಯಕ. ಬಿಟ್‌ ಕಾಯಿನ್‌ನಲ್ಲೂ ಅದನ್ನೇ ಮಾಡುತ್ತಿದೆ. ಟೀಕಿಸುವುದು ಬಿಟ್ಟು ಸಾಧನೆ ಮಾಡಿಲ್ಲ ಎಂದು ದೂರಿದರು.

ನಗರಸಭೆ ಅಧ್ಯಕ್ಷೆ ಸುಜಾತಾ ಜೇವರ್ಗಿ, ದೇವೇಂದ್ರ ನಾಧ್‌, ರಾಜಾ ಹನುಮಪ್ಪ ನಾಯಕ ತಾತಾ, ಮೇಲಪ್ಪ ಗುಳಗಿ, ವೇಣುಗೋಪಾಲ ಜೇವರ್ಗಿ, ವೇಣುಮಾಧವನಾಯಕ, ಅಮರಣ್ಣ ಹುಡೇದ್‌, ಬಿಜೆಪಿ ಉಸ್ತುವಾರಿ ಅರುಣಕುಮಾರ ಬಿನ್ನಾಡಿ ಗುರು ಕಾಮಾ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next