Advertisement

ವಿವಿಧೆಡೆ ಆಟಿ ಅಮಾವಾಸ್ಯೆ ಆಚರಣೆ

07:40 AM Jul 24, 2017 | Team Udayavani |

ಉಡುಪಿ/ಮಂಗಳೂರು: ಕರಾವಳಿಯ ವಿವಿಧೆಡೆ ರವಿವಾರ ಆಟಿ ಅಮಾವಾಸ್ಯೆ ಆಚರಣೆ ನಡೆಯಿತು. ಮನೆ ಮನೆಗಳಲ್ಲಿ ಹಾಲೆ ಮರದ ಕಷಾಯವನ್ನು ತಯಾರಿಸಿ ಕುಡಿದರು. ವಿವಿಧೆಡೆ ಸಂಘಟನೆಗಳು ಆಟಿಡೊಂಜಿ ದಿನವನ್ನು ಆಚರಿಸಿದರು.

Advertisement

ಬಂಟ್ವಾಳ ತಾಲೂಕಿನ ಕಾರಿಂಜ ಕ್ಷೇತ್ರ, ಕುಂದಾಪುರ ತಾಲೂಕಿನ ಮರವಂತೆ ದೇವ ಸ್ಥಾನಗಳಲ್ಲಿ ತೀರ್ಥಸ್ನಾನ ಜಾತ್ರೆ ಗಳು ನಡೆದವು, ಸಾವಿರಾರು ಜನರು ಪಾಲ್ಗೊಂಡರು. ಬೈಂದೂರು ಸೋಮೇಶ್ವರದಲ್ಲಿ ಸಮುದ್ರಸ್ನಾನ ವಿಶೇಷವಾಗಿತ್ತು. ಮಲ್ಪೆ ಸಮುದ್ರದಲ್ಲಿಯೂ ಸ್ನಾನ ಮಾಡಿದರು.

ಸೋಮವಾರದಿಂದ ಶ್ರಾವಣ ಮಾಸ ಆರಂಭವಾಗಲಿದ್ದು ವಾರ್ಷಿಕ ಹಬ್ಬ ಹರಿದಿನಗಳು ಆರಂಭವಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next