Advertisement

ಕಮಲ್‌ಪಂತ್‌ ವಿರುದ್ಧ ತನಿಖೆಗೆ ಆದೇಶ..!

10:07 AM Nov 25, 2021 | Team Udayavani |

ಬೆಂಗಳೂರು: ಶಾಸಕ ರಮೇಶ್‌ ಜಾರಕಿಹೊಳಿ ವಿರುದ್ಧದ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್‌ ದಾಖಲಿಸದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌, ಡಿಸಿಪಿಯಾ ಗಿದ್ದ ಎಂ.ಎನ್‌. ಅನುಚೇತ್‌ ಹಾಗೂ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣಾಧಿಕಾರಿ ಬಿ. ಮಾರುತಿ ವಿರುದ್ಧ ತನಿಖೆ ನಡೆಸಲು ನಗರದ ಮ್ಯಾಜಿಸ್ಟ್ರೇಟ್‌ (8ನೇ ಎಸಿಎಂಎಂ) ನ್ಯಾಯಾಲಯ ಆದೇಶಿಸಿದ ಬೆನ್ನಲ್ಲೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

Advertisement

ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ಆದೇಶ ರದ್ದುಪಡಿಸು ವಂತೆ ಕೋರಿ ಕಮಲ್‌ ಪಂತ್‌, ಅನುಚೇತ್‌, ಬಿ. ಮಾರುತಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಗುರುವಾರ ಅರ್ಜಿ ವಿಚಾರಣೆ ನಡೆಯಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕನಕಪುರದ ದಿನೇಶ್‌ ಕಲ್ಲಹಳ್ಳಿ ರಮೇಶ್‌ ಜಾರಕಿಹೊಳಿ ವಿರುದ್ಧ ಕಬ್ಬನ್‌ಪಾಕ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ;- ನಾನೇ ಖುದ್ದು ಫೀಲ್ಡ್‌ಗೆ ಬರ್ತೀನಿ – ಸಿಎಂ !

ದೂರು ಆಧರಿಸಿ ಎಫ್ ಐಆರ್‌ ದಾಖಲಿಸಿಲ್ಲ ಎಂದು ಜನಾಧಿಕಾರ ಸಂಘರ್ಷ ಪರಿಷತ್‌ ಅಧ್ಯಕ್ಷ ಆದರ್ಶ ಆರ್‌. ಅಯ್ಯರ್‌ ಖಾಸಗಿ ದೂರು ದಾಖಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ತನಿಖೆಗೆಸೋಮಣ್ಣ, ಮುನಿರತ್ನ, ಅಧಿಕಾರಿಗಳಾದ ಕುಮಾರ್‌ ನಾಯಕ್‌, ಗೌರವ ಗುಪ್ತ , ಸೆಲ್ವ ಕುಮಾರ್‌, ಪಿ.ಪ್ರದೀಪ್‌, ವಿಶ್ವವಿದ್ಯಾಲಯದ ಕುಲಪತಿ ಡಾ.ಭಾನುಮೂರ್ತಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next