Advertisement

ಶಾರೀಕ್ ಜತೆ ಮಂಗಳೂರಿಗೆ ಮತ್ತೊಬ್ಬ ಬಂದಿದ್ದನಾ..? ವೈರಲ್ ಆಗುತ್ತಿದೆ ಸಿಸಿಟಿವಿ ಫುಟೇಜ್

12:45 PM Nov 22, 2022 | Team Udayavani |

ಮಂಗಳೂರು: ಇಲ್ಲಿ ನಾಗುರಿ ಬಳಿ ನಡೆದ ರಿಕ್ಷಾ ಸ್ಪೋಟಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಶಾರೀಕ್ ಜೊತೆ ಮತ್ತೊಬ್ಬ ಮಂಗಳೂರಿಗೆ ಆಗಮಿಸಿದ್ದನೆ ಎಂಬ ಅನುಮಾನ ಉಂಟಾಗಿದೆ. ಇದಕ್ಕೆ ಕಾರಣ ಸದ್ಯ ವೈರಲ್ ಆಗುತ್ತಿರುವ ಸಿಸಿಟಿವಿ ದೃಶ್ಯಗಳು.

Advertisement

ಮೈಸೂರಿನಿಂದ ಬಂದಿದ್ದ ಶಾರೀಕ್ ಪಡೀಲ್ ನಲ್ಲಿ ಇಳಿದು ಮದ್ಯ ಖರೀದಿ ಮಾಡುವ ಸಂದರ್ಭ ಆತನ ಜತೆ ಮತ್ತೊಬ್ಬನಿದ್ದ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಮಿಷನರ್ ಸ್ಪಷ್ಟನೆ: ಈ ಬಗ್ಗೆ ಸ್ಪಷ್ಟನೆ ನೀಡಿದ ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಈ ಸಿಸಿಟವಿ ವಿಡಿಯೋದಲ್ಲಿ ಇರುವುದು ಶಾರೀಕ್ ಅಲ್ಲ ಎಂದಿದ್ದಾರೆ. ಅಲ್ಲದೆ ಶಾರೀಕ್ ಒಬ್ಬನೆ ಮೈಸೂರಿನಿಂದ ಬಂದಿದ್ದ ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಸೋಮವಾರ ತಿಳಿಸಿದ್ದರು.

ಇದನ್ನೂ ಓದಿ:ಕರಾವಳಿಯಲ್ಲಿ ಎನ್ಐಎ ಘಟಕ ಆರಂಭಕ್ಕೆ ಸಂಸತ್ ನಲ್ಲಿ ವಿಷಯ ಪ್ರಸ್ತಾಪ: ತೇಜಸ್ವಿ ಸೂರ್ಯ

ಡಿಸಿಪಿ ಭೇಟಿ: ಘಟನೆಯಲ್ಲಿ ಗಾಯಗೊಂಡು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾರೀಕ್ ಆರೊಗ್ಯ ಸ್ಥಿತಿ ವಿಚಾರಣೆಗೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅನ್ಶು ಕುಮಾರ್ ಭೇಟಿ ನೀಡಿದರು.

Advertisement

ಗಾಯಾಳು ಶಾರೀಕ್ ಚಿಕಿತ್ಸೆ ಪಡೆಯುವ ಖಾಸಗಿ ಆಸ್ಪತ್ರೆಯಲ್ಲಿ ಪೊಲೀಸ್ ವಿಶೇಷ ನಿಗಾ ವಹಿಸಲಾಗಿದೆ.

ಶೇ.25 ಕ್ಕಿಂತ ಅಧಿಕ ಪ್ರಮಾಣದ ಸುಟ್ಟ ಗಾಯಗಳಾಗಿದ್ದರೆ ಸಾಮಾನ್ಯವಾಗಿ ತುಂಬಾ ಕಾಳಜಿ ವಹಿಸಬೇಕಾಗುತ್ತದೆ.‌ ಮುಂದಿನ ಸಮಗ್ರ ತನಿಖೆಗೆ ಶಾರೀಕ್ ಆರೋಗ್ಯ ಸುಧಾರಣೆ ಅಗತ್ಯವಾಗಿದೆ. ಹಾಗಾಗಿ ಹೆಚ್ಚಿನ ಕಾಳಜಿ ವಹಿಸಲಾಗಿದೆ. ಪುರುಷೋತ್ತಮ ಅವರಿಗೂ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಈಗಾಗಲೆ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next