Advertisement

ಕರ್ನಾಟಕ ಸಹಿತ 19 ರಾಜ್ಯಗಳಲ್ಲಿ ಸಿಬಿಐ ದಾಳಿ

01:26 AM Jul 10, 2019 | Team Udayavani |

ಹೊಸದಿಲ್ಲಿ: ಭ್ರಷ್ಟಾಚಾರ, ಕಳ್ಳಸಾಗಣೆ ಹಾಗೂ ಕ್ರಿಮಿನಲ್‌ ದುರ್ನಡತೆಗೆ ಸಂಬಂಧಿಸಿದಂತೆ ದಾಖಲಾಗಿರುವ ಹೊಸ ಪ್ರಕರಣಗಳ ಆಧಾರದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ಮಂಗಳವಾರ, ಕರ್ನಾಟಕ ಸಹಿತ ದೇಶದ 19 ರಾಜ್ಯಗಳ 110 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.
ದಿಲ್ಲಿ, ಮುಂಬಯಿ, ಚಂಡಿಗಢ, ಜಮ್ಮು, ಶ್ರೀನಗರ, ಪುಣೆ, ಜೈಪುರ, ಗೋವಾ, ರಾಯು³ರ, ಹೈದರಾಬಾದ್‌, ಮಧುರೈ, ಕೋಲ್ಕತಾ, ರೂರ್ಕೆಲಾ, ರಾಂಚಿ, ಬೊಕಾರೊ, ಲಕ್ನೋ, ಕಾನ್ಪುರ ನಗರ ಗಳಲ್ಲಿ ಹಾಗೂ ಕರ್ನಾಟಕ, ಉತ್ತರ ಪ್ರದೇಶ, ಉತ್ತರಾ ಖಂಡ, ಒಡಿಶಾ, ಹಿಮಾಚಲ ಪ್ರದೇಶ, ಪಂಜಾಬ್‌, ಹರಿಯಾಣ, ಆಂಧ್ರಪ್ರದೇಶ, ಬಿಹಾರ ರಾಜ್ಯಗಳ ಕೆಲವು ಸ್ಥಳಗಳಲ್ಲಿ ದಾಳಿ ನಡೆದಿದೆ. ದಾಳಿಯ ಬಗ್ಗೆ ಯಾವುದೇ ಮಾಹಿತಿ ನೀಡಲಾಗಿಲ್ಲ. ಬ್ಯಾಂಕ್‌ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ, ಕಳೆದ ಮಂಗಳವಾರವೂ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಸಿಬಿಐ ಹೀಗೆ ಏಕಕಾಲದಲ್ಲಿ ದಾಳಿ ನಡೆಸಿತ್ತು.

Advertisement

11 ಸ್ಥಳಗಳಲ್ಲಿ ಶೋಧ: ಈ ನಡುವೆ, ಉತ್ತರಪ್ರದೇಶದಲ್ಲಿ ಮಾಯಾ ವತಿ ಅವರು ಆಡಳಿತಾವಾಧಿಯಲ್ಲಿ ನಡೆದಿದೆ ಎನ್ನ ಲಾದ ಸಕ್ಕರೆ ಮಿಲ್‌ಗ‌ಳ ಬಂಡವಾಳ ವಾಪಸ್‌ ಹಗರಣಕ್ಕೆ ಸಂಬಂಧಿಸಿ ಮಂಗಳವಾರವೇ ಲಕ್ನೋ ಮತ್ತು ಎನ್‌ಸಿಆರ್‌ ಪ್ರದೇಶದ 11 ಕಡೆ ಸಿಬಿಐ ಶೋಧ ಕಾರ್ಯ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next