Advertisement

Cauvery Water; ತಮಿಳುನಾಡಿಗೆ ಹರಿಯುತ್ತಿದೆ ನಿತ್ಯ 1.5 ಟಿಎಂಸಿ ನೀರು: ಡಿ.ಕೆ ಶಿವಕುಮಾರ್‌

01:14 AM Jul 17, 2024 | Team Udayavani |

ಬೆಂಗಳೂರು:  ಕಾವೇರಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಈವರೆಗೆ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ 6 ಟಿಎಂಸಿ ನೀರು ಹರಿದು ಹೋಗಿರುವುದು ದಾಖಲಾಗಿದೆ. ಅಂದರೆ ಪ್ರತೀ ದಿನ 1.5 ಟಿಎಂಸಿಯಷ್ಟು ನೀರು ತಮಿಳುನಾಡಿಗೆ ಬಿಡಲಾಗಿದೆ. ಪರಿಸ್ಥಿತಿ ಹೀಗೇ ಇದ್ದರೆ ಸಮಸ್ಯೆ ಬಗೆಹರಿಯಲಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ಮಂಗಳವಾರ ವಿಧಾನಸೌಧದಲ್ಲಿ ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಬಳಿಕ ವಿಧಾನಸಭೆಯಲ್ಲಿ ಈ ಕುರಿತು ಸ್ವಯಂಪ್ರೇರಿತ ಹೇಳಿಕೆ ದಾಖಲಿಸಿದ ಅವರು, ಹಾರಂಗಿ ಜಲಾಶಯದ ಒಳಹರಿವಿನ ಪ್ರಮಾಣವು 12,827 ಕ್ಯುಸೆಕ್‌ ಇದ್ದು, ಹೇಮಾವತಿ ಜಲಾಶಯಕ್ಕೆ 14,027 ಕ್ಯುಸೆಕ್‌ ನೀರು ಹರಿದುಬರುತ್ತಿದೆ. ಅದೇ ರೀತಿ ಕೆಆರ್‌ಎಸ್‌ಗೆ 25,933 ಕ್ಯುಸೆಕ್‌ ಮತ್ತು ಕಬಿನಿ ಜಲಾಶಯದ ಒಳಹರಿವಿನ ಮಟ್ಟ 22,840 ಕ್ಯುಸೆಕ್‌ ಇದೆ ಎಂದು ವಿವರಿಸಿದರು.

ಕಾವೇರಿ ನಿಯಂತ್ರಣ ಸಮಿತಿ (ಸಿಡಬ್ಲ್ಯುಸಿ) ನಿರ್ದೇಶನದ ಪ್ರಕಾರ ಬಿಳಿಗುಂಡ್ಲುವಿನಲ್ಲಿ 40 ಟಿಎಂಸಿ ನೀರು ಮಾಪನವಾಗಬೇಕು. ಈವರೆಗೆ 6 ಟಿಎಂಸಿ ನೀರು ದಾಖಲಾಗಿದ್ದು, ದಿನಕ್ಕೆ 1.5 ಟಿಎಂಸಿ ನೀರನ್ನು ತಮಿಳುನಾಡಿಗೆ ಬಿಟ್ಟಂತಾಗಿದೆ. ಪರಿಸ್ಥಿತಿ ಹೀಗೇ ಇದ್ದರೆ ಸಮಸ್ಯೆ ಬಗೆಹರಿಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next