Advertisement

ಚಂದ್ರು ಶ್ವಾಸಕೋಶದಲ್ಲಿ ನೀರು? ಏನಿದು ಡಯಾಟಮ್‌?

12:07 AM Nov 08, 2022 | Team Udayavani |

ದಾವಣಗೆರೆ: ರೇಣುಕಾಚಾರ್ಯ ಅವರ ಸಹೋದರನ ಪುತ್ರ ಎಂ.ಆರ್‌. ಚಂದ್ರಶೇಖರ್‌ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್‌ ಇಲಾಖೆ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಮರಣೋತ್ತರ ಪರೀಕ್ಷೆ ವರದಿ ನಿರೀಕ್ಷೆಯಲ್ಲಿದೆ.

Advertisement

ಚಂದ್ರಶೇಖರ್‌ ಕುಟುಂಬದವರು ಕೊಲೆ ಎಂದೇ ಹೇಳುತ್ತಿದ್ದಾರೆ. ಆದರೆ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಮರಣೋತ್ತರ ಪರೀಕ್ಷೆ ವರದಿ ಬರುವವರೆಗೆ ಯಾವುದನ್ನೂ ಖಚಿತ ಪಡಿಸುವಂತಿಲ್ಲ. ಚಂದ್ರಶೇಖರ್‌ ಸಾವಿನ ಕುರಿತಂತೆ ಡಯಾಟಮ್‌ ಪರೀಕ್ಷೆ ವರದಿ ಪೊಲೀಸ್‌ ಇಲಾಖೆ ಕೈ ಸೇರಿದೆ ಎನ್ನಲಾಗುತ್ತಿದೆ. ಆದರೆ ಇಲಾಖೆ ಖಚಿತಪಡಿಸುತ್ತಿಲ್ಲ.

ಏನಿದು ಡಯಾಟಮ್‌?
ಯಾರಾದರೂ ನೀರಿನಲ್ಲಿ ಮುಳುಗಿ ಸತ್ತರೆ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿರುತ್ತದೆ. ಸಾವಿನ ಬಳಿಕ ನೀರು ಶ್ವಾಸಕೋಶಕ್ಕೆ ಸೇರುವ ಸಾಧ್ಯತೆ ಇರುವುದಿಲ್ಲ. ಶವ ಪತ್ತೆಯಾಗಿರುವ ಜಾಗದ ನೀರು ಮತ್ತು ಶ್ವಾಸಕೋಶದಲ್ಲಿನ ನೀರನ್ನು ಪರೀಕ್ಷೆಗೆ ಒಳಪಡಿಸುವುದೇ ಡಯಾಟಮ್‌ ಪರೀಕ್ಷೆ. ಚಂದ್ರಶೇಖರ್‌ ಶವ ಪತ್ತೆಯಾದ ತುಂಗಾ ನಾಲೆಯ ಮತ್ತು ಶ್ವಾಸಕೋಶದಲ್ಲಿ ಸಂಗ್ರಹವಾಗಿದ್ದ ನೀರಿನ ಪರೀಕ್ಷೆ ನಡೆಸಲಾಗಿದೆ. ಮೂಲಗಳ ಪ್ರಕಾರ ಚಂದ್ರಶೇಖರ್‌ ಸಾವಿಗೂ ಮುನ್ನ ನಾಲೆಗೆ ಬಿದ್ದಿದ್ದು, ನಾಲೆಯ ನೀರು ಕುಡಿದಿದ್ದಾರೆ ಎನ್ನಲಾಗುತ್ತಿದೆ. ಆದರೆ ಸಂಬಂಧಿ ಸಿದವರು ಯಾವುದನ್ನೂ ಖಚಿತಪಡಿಸುತ್ತಿಲ್ಲ.

 

Advertisement

Udayavani is now on Telegram. Click here to join our channel and stay updated with the latest news.

Next