Advertisement

ನಂಚಾರು: ಜಾನುವಾರು ಸಾಗಾಟ; ಆರೋಪಿಗಳು ಪರಾರಿ

12:41 PM Mar 31, 2019 | keerthan |

ಕೋಟ: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಕೋಟ ಪೊಲೀಸರು ಶನಿವಾರ ಬೆಳಗಿನ ಜಾವ ನಂಚಾರು ಗ್ರಾಮದ ಕೊಳ್ಕೆಬೈಲಿನಲ್ಲಿ ವಶಪಡಿಸಿಕೊಂಡು 11 ಜಾನುವಾರುಗಳನ್ನು ರಕ್ಷಿಸಿದ್ದಾರೆ. ವಾಹನದಲ್ಲಿದ್ದ ಮೂರು ಜಾನುವಾರುಗಳು ಸಾವಿಗೀಡಾಗಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

Advertisement

ಖಚಿತ ಮಾಹಿತಿ ಮೇರೆಗೆ ಉಪನಿರೀಕ್ಷಕ ರಫೀಕ್‌ ಎಂ. ಅವರು ಸಿಬಂದಿ ಜತೆಯಲ್ಲಿ ಕೊಳ್ಕೆಬೈಲು ಜಂಕ್ಷನ್‌ ಬಳಿ ಅನುಮಾನದ ಮೇರೆಗೆ ಬೈಕ್‌ ಹಾಗೂ ಬೊಲೆರೋ ಪಿಕ್‌ಅಪ್‌ ವಾಹನವನ್ನು ತಡೆದರು. ಕೂಡಲೇ ಅದರ ಚಾಲಕರು ವಾಹನವನ್ನು ಚಾಲನೆ ಸ್ಥಿತಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಣಾಮ ಪಿಕಪ್‌ ವಾಹನ ಚರಂಡಿಗೆ ಬಿದ್ದಿದ್ದು, ಅದನ್ನು ಪರಿಶೀಲಿಸಿದಾಗ ಅಕ್ರಮ ಪತ್ತೆಯಾಗಿದೆ.

ಕ್ರೌರ್ಯಕ್ಕೆ ಸಾಕ್ಷಿ ಜಾನುವಾರುಗಳ ಸಾವು
ಚರಂಡಿಗೆ ಬಿದ್ದ ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಒಂದು ಹೆಣ್ಣು ಕರು, ಎರಡು ಗಂಡು ಕರು ಸಹಿತ ಮೂರು ಜಾನುವಾರುಗಳು ಮೃತಪಟ್ಟಿದ್ದು, 3 ದನ, 6 ಗಂಡು ಕರು ಮತ್ತು 2 ಹೆಣ್ಣು ಕರುಗಳ ಸಹಿತ 11 ಜಾನುವಾರುಗಳು ಜೀವಂತವಾಗಿ ಪತ್ತೆಯಾಗಿದೆ. ಅನಂತರ ಅವುಗಳನ್ನು ರಕ್ಷಿಸಿ ಠಾಣೆಗೆ ತರಲಾಯಿತು.

ಕಳವು ಶಂಕೆ
ಒಂದು ದನದ ಕಿವಿಯಲ್ಲಿ ಟಿಕ್ಕಿ ಇದೆ. ಹೀಗಾಗಿ ಜಾನುವಾರುಗಳನ್ನು ಕದ್ದು ತಂದಿರಬಹುದು ಎನ್ನಲಾಗಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next