Advertisement
ತೀರ್ಥಹಳ್ಳಿ ತಾಲೂಕಿನ ಪುಟ್ಟ ಗ್ರಾಮ ಮೃಗವಧೆ. ಈಶ್ವರನು ಶನಿಕಾಟದಿಂದ ಮುಕ್ತನಾದ ಸ್ಥಳ ಮತ್ತು ಶ್ರೀರಾಮನು ಮಾರೀಚ ಮೃಗವಧೆ ಮಾಡಿದ ಸ್ಥಳ ಎಂಬುದಾಗಿ ಸ್ಥಳಪುರಾಣ ಹೊಂದಿ, ನಾಡಿನ ಮೂಲೆಮೂಲೆಯಿಂದ ಭಕ್ತರನ್ನು ಆಕರ್ಷಿಸುವ ಪುಣ್ಯಧಾಮ ಇದು.
Related Articles
Advertisement
ಚುರುಕು ಅಡುಗೆ: “ಇದು ಸಾಮಾನ್ಯ ಹಳ್ಳಿ. ಬೆಳಗ್ಗೆ ಬಂದ ಭಕ್ತರು ಮಧ್ಯಾಹ್ನ ಊಟಕ್ಕೆ ನಿಲ್ಲುತ್ತಾರೆ ಎಂದು ಹೇಳಲಾಗದು. ಕೆಲವೊಮ್ಮೆ 12.30ರ ನಂತರ ಬರುವ ನಾಲ್ಕಾರು ಬಸ್ಸುಗಳಲ್ಲಿ, ಭಕ್ತರು ಬರುವುದೂ ಉಂಟು. ಹಾಗೆ ಊಟದ ಹೊತ್ತಿನಲ್ಲಿ ಬಂದರೂ, ಅಡುಗೆ ತಯಾರಿ ಕಷ್ಟವೇನೂ ಆಗಿಲ್ಲ. ಮತ್ತೆ ಅಡುಗೆ ಮಾಡಿ, ಬಡಿಸಿದ ಉದಾಹರಣೆಗಳು ಇಲ್ಲಿ ಸಾಕಷ್ಟಿವೆ’ ಎನ್ನುತ್ತಾರೆ, ಅಡುಗೆ ಉಸ್ತುವಾರಿ ನೋಡಿಕೊಳ್ಳುವ ಎ.ವಿ. ವೆಂಕಟೇಶ್.
“ಹಾಲಿ ಭೋಜನಶಾಲೆಯಲ್ಲಿ ಒಮ್ಮೆಗೆ 300 ಜನ ಊಟ ಮಾಡಬಹುದು. ಹೊಸದಾಗಿ ನಿರ್ಮಾಣವಾಗಿ ಪೂರ್ಣಗೊಳ್ಳುವ ಹಂತದಲ್ಲಿರುವ ಭೋಜನಶಾಲೆಯಲ್ಲಿ 400 ಭಕ್ತರು ಕೂರಬಹುದು’ ಎನ್ನುತ್ತಾರೆ, ಸಿಬ್ಬಂದಿ ಸಿ.ವಿ. ರವಿ.
ಹಳ್ಳಿಯ ತಾಜಾ ತರಕಾರಿ: ಇಲ್ಲಿನ ಇನ್ನೊಂದು ವಿಶೇಷ, ಮೃಗವಧೆ ಗ್ರಾಮದ ಮಹಿಳೆಯರು ಊಟ ಬಡಿಸಲು ಕೈಜೋಡಿಸುವುದು. ಭಕ್ತಾದಿಗಳು ಅಕ್ಕಿ, ತರಕಾರಿ, ತೆಂಗಿನಕಾಯಿ ಜೊತೆಗೆ ಹಣಕಾಸಿನ ನೆರವನ್ನೂ ನೀಡುವುದರೊಂದಿಗೆ, ಈ ಕ್ಷೇತ್ರದ ಅಭಿವೃದ್ಧಿಗೆ ನೆರವಾಗಿರುವುದು ಸಂತಸದ ವಿಚಾರವೇ ಆಗಿದೆ.
ಸಂಖ್ಯಾ ಸೋಜಿಗ20- ಕಿಲೊ ಅಕ್ಕಿಯಿಂದ ಅನ್ನ
30- ಕಿಲೊ ತರಕಾರಿ ಬಳಕೆ
200- ಮಂದಿಗೆ ನಿತ್ಯ ಭೋಜನ (ಸರಾಸರಿ)
400- ಜನರ ಸಾಮರ್ಥ್ಯದ ಹೊಸ ಭೋಜನಶಾಲೆ
2000- ಮಂದಿಗೆ ಜಾತ್ರೆ ವೇಳೆ ಭೋಜನ * ಅಭಿನಂದನ್ ಮೃಗವಧೆ