Advertisement

ಕಾಡಾನೆಗಳ ದಾಳಿ: ನೆಲಕ್ಕುರುಳಿದ ಸಾವಿರಾರು ಮರಗಳು

01:00 PM May 30, 2017 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಭಾಗದಲ್ಲಿ ಕಳೆದರೆಡು ತಿಂಗಳಿನಿಂದ ಮಿತಿ ಮೀರಿದ್ದು,  ಲಕ್ಷಾಂತರ ರೂ ಬೆಳೆನಷ್ಟ ಉಂಟಾಗಿದ್ದು, ಬರದ ನಡುವೆಯೂ ಬೆಳೆದ ಬೆಳೆಗಳನ್ನು ಉಳಿಸಿಕೊಳ್ಲಲು ರೆತರು ಹೆಣಗಾಡುತ್ತಿದ್ದಾರೆ.

Advertisement

ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಲ್ಲೇನಹೊಸಹಳ್ಳಿ, ಕೆ.ಜೆ.ಹಬ್ಬನಕುಪ್ಪೆ, ಚಂದನಗಿರಿ, ಕೋಣನಹೊಸಹಳ್ಳಿ, ಕೊಳವಿಗೆ,ನೇರಳಕುಪ್ಪೆ, ಕಚುವಿನಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ನಿತ್ಯ ಕಾಡಾನೆಗಳ ಹಾಜರಾತಿ ಕಡ್ಡಾಯವಾಗಿದ್ದು, ರೆತರು ಕಷ್ಟಪಟ್ಟು ಬೆಳೆದಿರುವ ಮಾವಿನ ಮರಗಳು, ಕಾಫಿ,ಮೆಣಸು, ಮರಗೆಣಸು, ಶುಂಠಿ,ಜೋಳ ಸೇರಿದಂತೆ  ನೂರಾರು ಎಕರೆ ಪ್ರದೇಶದ ಬೆಳೆಗಳು ಆನೆಗಳ ಪಾಲಾಗುತ್ತಿವೆ.

ಕೆ.ಜೆ.ಹಬ್ಬನಕುಪ್ಪೆಯ ತರಗನ್‌ ಎಸ್ಟೇಟ್‌ ಒಂದರಲ್ಲೇ ಕಳೆದರೆಡು ತಿಂಗಳಿನಿಂದೀಚೆಗೆ ಕಾಡಾನೆಗಳ ಹಿಂಡು ಸುಮಾರು1200 ಮರಗಳನ್ನು ಕೆಡವಿ ಹಾಕಿವೆ, ಅಲ್ಲದೆ ಕಾಳಬೋಚನಹಳ್ಳಿಯ ಕೆ.ಟಿ. ಪುಟ್ಟರಾಜ್‌ರ ಮರಗೆಣಸು ಬೆಳೆಗೆ ಲಗ್ಗೆ ಇಟ್ಟ ಕಾಡಾನೆಗಳ ಹಿಂಡು ಬೆಳೆಯನ್ನು ತಿಂದು ತುಳಿದು ನಾಶ ಪಡಿಸಿ ಲಕ್ಷಾಂತರ ರೂ ನಷ್ಟ ಪಡಿಸಿವೆ. ಇದಲ್ಲದೆ ಅಕ್ಕ-ಪಕ್ಕದ ರೆತರ ಶುಂಠಿ ಬೆಳೆ ಹಾಗೂ ಪೆಪ್‌ಗ್ಳನ್ನು ಸಹ ನಾಶ ಪಡಿಸಿವೆ.

ಪಕ್ಕದ ಚಂದನಗಿರಿಯ  ಶಾಂತಿಭೂಪತಿಗೆ ಸೇರಿದ ಶುಂಠಿ ಜಮೀನಿಗೂ ಲಗ್ಗೆ ಇಟ್ಟ ಕಾಡಾನೆಗಳು ಬೆಳೆ ಹಾಗೂ ಪಂಪ್‌ಸೆಟ್‌ನ ಪೆಪ್‌ಗ್ಳನ್ನು ನಾಶಪಡಿಸಿವೆ. ಹೆಬ್ಬನಕುಪ್ಪೆ ಗ್ರಾಮದ ಪೂಣಚ್ಚ, ಜಿ.ಎಂ,ದೇವಯ್ಯ, ಚಂದ್ರಶೇಖರ್‌ ರವರ ಕಾಫಿ ತೋಟ ಹಾಗೂ ಶುಂಠಿ ಬೆಳೆ ಹಾಗೂ ಪೆಪ್‌ಗ್ಳನ್ನು ಸಹ ನಾಶ ಪಡಿಸಿವೆ.

ರೆಲುಕಂಬಿ ತಡೆಗೋಡೆ ನಿರ್ಮಿಸಿ, ಆನೆಗಳ ಹಾವಳಿ ತಪ್ಪಿಸಿ:
ವೀರನಹೊಸಹಳ್ಳಿ ಗೇಟ್‌ನಿಂದ ಕೊಳುವಿಗೆವರೆಗೆ ಮಾತ್ರ ರೆಲುಕಂಬಿಯ ತಡೆಗೋಡೆ ನಿರ್ಮಿಸಿದ್ದು, ಆಭಾಗದಲ್ಲಿ ಕಾಡಾನೆ ಹಾವಳಿ ನಿಯಂತ್ರಣದಲ್ಲಿದೆ, ಆದರೆ ಕೋಣನಹೊಸಹಳ್ಳಿಯಿಂದ  ಅಳ್ಳೂರಿನವರೆಗೆ ತಡೆಗೋಡೆ ಇಲ್ಲದೆ ಆನೆಗಳು ನದಿಯನ್ನು ದಾಟಿ ಆರಾಮವಾಗಿ ಹೊರಬರುತ್ತಿವೆ.ರೆತರ ಗೋಳು  ಅರಣ್ಯ ರೋಧನವಾಗಿದೆ.

Advertisement

ರೆಲು ಕಂಬಿ ತಡೆಗೋಡೆ ನಿರ್ಮಿಸುವವರೆಗಾದರೂ  ನಿಯಮಿತವಾಗಿ ಆನೆಗಳ ದಾಟದಂತೆ ಕಾವಲು ಹಾಕಬೇಕು,ನಷ್ಟಕ್ಕೆ ತಕ್ಕ ಪರಿಹಾರ ನೀಡಬೇಕು, ಇಲ್ಲದಿದ್ದಲ್ಲಿ ಅರಣ್ಯ ಇಲಾಖೆ ವಿರುದ್ದ ಪ್ರತಿಭಟನೆ ನಡೆಸುವುದಾಗಿ ರೆತರು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next