Advertisement

ಜಾತಿ ಸಮೀಕ್ಷೆಯಿಂದ ಯಾರಿಗೂ ಅನ್ಯಾಯ ಆಗದು: ಸಚಿವ ತಂಗಡಗಿ

11:06 PM Oct 08, 2023 | Team Udayavani |

ಕೊಪ್ಪಳ: ಕಾಂತರಾಜು ಅವರ ಜಾತಿವಾರು ಸಮೀಕ್ಷೆ ವರದಿಯಿಂದ ಯಾವುದೇ ಸಮಾಜಕ್ಕೆ ಅನ್ಯಾಯವಾಗುವುದಿಲ್ಲ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್‌ ತಂಗಡಗಿ ಹೇಳಿದರು. ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಗದ ವರದಿ ಇನ್ನೂ ಸ್ವೀಕಾರವಾಗಿಲ್ಲ. ವರದಿ ಸ್ವೀಕರಿಸಿದ ಬಳಿಕ ಅದರ ಸಾಧಕ-ಬಾಧಕಗಳ ಚರ್ಚೆ, ಪರಿಶೀಲನೆ ನಡೆಸಲಾಗುವುದು.

Advertisement

ವರದಿ ಸ್ವೀಕಾರಗೊಳ್ಳದೆ ಅದರ ಅಂಶಗಳನ್ನು ತಿಳಿಯಲು ಸಾಧ್ಯವಿಲ್ಲ. ಸಿಎಂ ಸಿದ್ದರಾಮಯ್ಯ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿ ತಿಳಿಯಲು ಈ ಸಮೀಕ್ಷೆ ನಡೆಸಿದ್ದು, ಅದನ್ನು ವಿರೋಧಿಸುವ ಅಗತ್ಯವೇ ಇಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next