Advertisement

Koppala: ಅಂಧ ಮುಸ್ಲಿಂ ವೃದ್ದನ ಮೇಲೆ ಹಲ್ಲೆ ಪ್ರಕರಣ: ಇಬ್ಬರ ಬಂಧನ

02:43 PM Dec 06, 2023 | Team Udayavani |

ಕೊಪ್ಪಳ: ಜಿಲ್ಲೆಯ ಗಂಗಾವತಿ ನಗರದಲ್ಲಿ ಇತ್ತೀಚೆಗೆ ರಾತ್ರಿ ಅಂಧ ಮುಸ್ಲಿಂ ವೃದ್ದನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಎಸ್ಪಿ ಯಧೋಧಾ ವಂಟಗೋಡಿ ತಿಳಿಸಿದರು.

Advertisement

ತಮ್ಮ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ, ಗಂಗಾವತಿಯಲ್ಲಿ ನ.25 ರಂದು ಬೆಳಗಿನ ಜಾವ ತನ್ನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ವೃದ್ದ ಮುಸ್ಲಿಂ ವ್ಯಕ್ತಿ ದೂರು ನೀಡಿದ್ದರು. ಇದೊಂದು ಸೂಕ್ಷ್ಮ ವಿಷಯವಾದ ಹಿನ್ನೆಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿದ ವೇಳೆ ಸಾಗರ್ ಹಾಗೂ ನರಸಪ್ಪ ಎನ್ನುವ ಇಬ್ಬರು ವ್ಯಕ್ತಿಗಳು ವೃದ್ದನ ಮೇಲೆ ಹಲ್ಲೆ ಮಾಡಿದ್ದು ತಿಳಿದು ಬಂದಿದೆ ಎಂದು ಹೇಳಿದರು.

ವೃದ್ದ ಹೊಸಪೇಟೆಯಿಂದ ಗಂಗಾವತಿ ನಗರಕ್ಕೆ ಬೆಳಗಿನ ಜಾವ ಆಗಮಿಸಿ ಆರೋಪಿತರ ಬಳಿ ಡ್ರಾಪ್ ಕೇಳಿದ್ದಾನೆ. ಡ್ರಾಪ್ ಮಾಡುವ ವೇಳೆ ಓರ್ವ ಆರೋಪಿ ನರಸಪ್ಪ ವೃದ್ದನ ಟೋಪಿ ಮುಟ್ಟಿದ್ದಾನೆ. ಈ ವೇಳೆ ವೃದ್ದನೂ ಅವರಿಗೆ ಬಿರುಸಾಗಿ ಮಾತನಾಡಿದ್ದಾನೆ. ಇಬ್ಬರು ಆರೋಪಿಗಳು ಆ ವೇಳೆ ಮದ್ಯ ಸೇವನೆ ಮಾಡಿದ್ದರಿಂದ ಕುಪಿತಗೊಂಡು ಸಿದ್ದಿಕೇರಿ ಸಮೀಪದ ರೈಲ್ವೆ ಸೇತುವೆ ಕೆಳಗೆ ವೃದ್ದನಿಗೆ ಹಲ್ಲೆ ಮಾಡಿ ಅಲ್ಲೆ ಬಿಟ್ಟು ಹೋಗಿದ್ದಾರೆ. ವೃದ್ದ ನರಳುತ್ತಾ ಬಿದ್ದಿದ್ದಾನೆ. ಆ ವೇಳೆ ಸ್ಥಳೀಯವಾಗಿ ಕುರಿ ಕಾಯುವ ಜ‌ನರು ವೃದ್ದನನ್ನು ರಕ್ಷಣೆ ಮಾಡಿದ್ದಾರೆ ಎಂದರು.

ಈ ಪ್ರಕರಣ ಪತ್ತೆಗೆ ನಮಗೆ ಸವಾಲಿನ ವಿಷಯವಾಗಿತ್ತು. ಸಾಗರ್ ಎನ್ನುವ ಓರ್ವ ವ್ಯಕ್ತಿ ಇಂಜಿನಿಯರಿಂಗ್‌ ಮುಗಿದಿದ್ದು ಸದ್ಯ ಗಂಗಾವತಿಯಲ್ಲಿದ್ದನು. ಪ್ರಕರಣದಲ್ಲಿ ಯಾವುದೇ ಕೋಮು ವಿಷಯವಿಲ್ಲ. ವೃದ್ದನ ಗಡ್ಡಕ್ಕೆ ಬೆಂಕಿ ಹಚ್ಚಿದ ಯಾವುದೇ ದಾಖಲೆ ಇಲ್ಲ‌. ಗಂಗಾವತಿಯಲ್ಲಿ ಎರಡೂ ಕಡೆ ಜನತೆ ನಮಗೆ ತನಿಖೆಯ ವೇಳೆ ಸಂಪೂರ್ಣ ಸಹಕಾರ ನೀಡಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next