Advertisement

ಉಡುಪಿ: ಫಾಝಿಲ್‌ ಕೊಲೆ ಆರೋಪಿಗಳನ್ನು ಬೆಂಬಲಿಸಿ ವಿವಾದಾತ್ಮಕ ಪೋಸ್ಟ್‌: ಪ್ರಕರಣ ದಾಖಲು

07:27 PM Aug 04, 2022 | Team Udayavani |

ಉಡುಪಿ: ಫಾಝಿಲ್‌ ಕೊಲೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿರುವ ವ್ಯಕ್ತಿಯೊಬ್ಬನ ಮೇಲೆ ಉಡುಪಿ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

“ಲಕ್ಷ್ಮೀಕಾಂತ್‌ ಬೈಂದೂರು’ ಎನ್ನುವ ಪ್ರೊಫೈಲ್‌ ಹೊಂದಿರುವ ವ್ಯಕ್ತಿ ಪ್ರಚೋದನಕಾರಿ ಪೋಸ್ಟ್‌ ಮಾಡಿದ ಆರೋಪಿ. ಈತ ಫೇಸ್‌ಬುಕ್‌ ಖಾತೆಯಲ್ಲಿ ಫಾಝಿಲ್‌ ಹತ್ಯೆ ಪ್ರಕರಣದ ಆರೋಪಿಗಳನ್ನು ಹೀರೋ ಎಂದು ಬಿಂಬಿಸಿ ಪ್ರಚೋದನಕಾರಿ ಶೀರ್ಷಿಕೆ ನೀಡಿ ಪೋಸ್ಟ್‌ ಮಾಡಿದ್ದ. ಈ ಕಾರಣಕ್ಕೆ ಲಕ್ಷ್ಮೀಕಾಂತ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next