Advertisement

Belthangady: ನೇಹಾ ಹತ್ಯೆ ಪ್ರತಿಭಟನೆ ನಿರತರ ಮೇಲೆ ಪ್ರಕರಣ

09:41 PM Jun 08, 2024 | Team Udayavani |

ಬೆಳ್ತಂಗಡಿ: ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಜಿರೆಯಲ್ಲಿ ಎ.22ರಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ಹಮ್ಮಿಕೊಂಡ ಪ್ರತಿಭಟನೆಯ ವಿಚಾರವಾಗಿ ತಡವಾಗಿ ಪ್ರಕರಣ ದಾಖಲಿಸಿದ ಘಟನೆ ನಡೆದಿದೆ.

Advertisement

ಘಟನೆ ವಿಚಾರವಾಗಿ ಪೊಲೀಸರು ಎಬಿವಿಪಿ ಸಂಚಾಲಕ ಸನಲ್‌ ಶೆಟ್ಟಿ ಮತ್ತು ಸಂಘಟಕರಾದ ಸಮಂತ್‌ ನೆರಿಯ, ಸುವಿತ್‌, ನಾಗೇಶ್‌ ಕೊಲ್ಲಿ ಮತ್ತು ಸುಮಾರು 20 ರಿಂದ 30 ಜನ ವಿದ್ಯಾರ್ಥಿಗಳು ಎಂದು ಉಲ್ಲೇಖೀಸಿ ಸ್ವಯಂಪ್ರೇರಿತವಾಗಿ ಪೊಲೀಸರು ದೂರು ದಾಖಲಿಸಿದ್ದಾರೆ.

ಇವರೆಲ್ಲರೂ ಗುಂಪು ಸೇರಿ ಚುನಾವಣ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಯಾವುದೇ ಅನುಮತಿ ಇಲ್ಲದೆ ಬಿತ್ತಿ ಪತ್ರ ಹಾಗೂ ಧ್ವಜವನ್ನು ಹಿಡಿದು ಬೆಳಾಲು ಕ್ರಾಸ್‌ನಿಂದ ಉಜಿರೆ ಜಂಕ್ಷನ್‌ ವರೆಗೆ ನಡೆದುಕೊಂಡು ಬಂದು ಸಾರ್ವಜನಿಕವಾಗಿ ಪ್ರತಿಭಟಿಸುವ ಮೂಲಕ ಲೋಕಸಭೆ ಚುನಾವಣ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಪಿಡಿಒ ಸಂಜೀವ ನಾಯ್ಕ ಅವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next