Advertisement

ಜನರ ಸಮಸ್ಯೆಗೆ ಕ್ಯಾರೇ ಎನ್ನುತ್ತಿಲ್ಲ ಗ್ರಾಮ ಪಂಚಾಯಿತಿ: ಡಿಸಿಗೆ ದೂರು

01:40 PM Jun 19, 2022 | Team Udayavani |

ಗುರುಮಠಕಲ್‌: ಗ್ರಾಪಂನಲ್ಲಿ ಜನಸಾಮಾನ್ಯರ ಯಾವುದೇ ಕೆಲಸಗಳು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ನೇಹಲ್‌ ಅವರಿಗೆ ಗ್ರಾಮಸ್ಥರೊಬ್ಬರು ವೇದಿಕೆಯಲ್ಲಿ ದೂರು ನೀಡಿದರು.

Advertisement

ತಾಲೂಕಿನ ಪುಟಪಾಕ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ ವೇಳೆ ವೇದಿಕೆಯೇರಿ ದೂರಿದರು. ಗ್ರಾಮದಲ್ಲಿ ಅನೇಕ ಸಮಸ್ಯೆಗಳಿವೆ. ಚರಂಡಿ ಸ್ವಚ್ಛತೆಯಿಲ್ಲ. ಮನೆಗಳ ಹಂಚಿಕೆಯಲ್ಲಿ ಅಸಮರ್ಪಕ ಆಗಿದೆ. ಸಿಸಿ ರಸ್ತೆಗಳ ದುರಸ್ತಿಗಾಗಿ, ಜನರ ಶುದ್ಧ ಕುಡಿಯುವ ನೀರಿನ ಸರಬರಾಜು ಮುಂತಾದ ಸಮಸ್ಯೆಗಳ ಕುರಿತು ಪಿಡಿಒಗಳಿಗೆ ಮನವಿ ಮಾಡಿದರೂ ಕ್ಯಾರೇ ಎನ್ನುತ್ತಿಲ್ಲ. ಜಿಲ್ಲಾಧಿಕಾರಿಗಳು ಹಳ್ಳಿ ಕಡೆ ಬಂದಾಗ ಮಾತ್ರ ಸ್ವಚ್ಛತೆ ಮಾಡುತ್ತಾರೆ. ನೀವು ಹೋದ ಮೇಲೆ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂದು ದೂರಿದರು.

ಈ ವೇಳೆ ಪೊಲೀಸರು ಅಡ್ಡ ಬಂದು ಏನೇ ಸಮಸ್ಯೆಗಳಿದ್ದರೂ ವೇದಿಕೆಯಲ್ಲಿ ವಾಗ್ವಾದ ಬೇಡ. ಪೊಲೀಸ್‌ ಠಾಣೆಗೆ ಬಂದು ಪ್ರಕರಣ ದಾಖಲಿಸಿ ಎಂದು ವ್ಯಕ್ತಿಯನ್ನು ಕೆಳಗಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next