Advertisement

ಭಯದ ಮುಂದೆ ಧೈರ್ಯಕ್ಕೇ ಗೆಲುವು

12:22 AM Jan 09, 2022 | Team Udayavani |

ನಾವು ಚಿಕ್ಕವರಿದ್ದಾಗ, ನಾವು ನಮಗೆ ಅರಿವಿಲ್ಲದೇ ಧೈರ್ಯಶಾಲಿಗಳಾಗಿರುತ್ತೇವೆ. ಅಷ್ಟೇ ಅಲ್ಲ, ಮುಂದೆ ನಮ್ಮ ಜೀವನ ಹೇಗಿರಬಹುದು ಎಂಬ ಬಗ್ಗೆ ನಿರ್ಭಯವಾಗಿ ಕನಸು ಕಾಣುತ್ತಿದ್ದೆವು. ಕನಸುಗಳಲ್ಲಿ ಹಲವು ವ್ಯತ್ಯಾಸಗಳಿರಬಹುದು. ಅಂದರೆ ಕೆಲವರು ಗಗನಯಾತ್ರಿಗಳು ಅಥವಾ ರಾಕೆಟ್‌ ವಿಜ್ಞಾನಿಗಳು ಆಗಲು ಬಯಸಬಹುದು. ಆದರೆ ನಾನು ಚಿಕ್ಕವಳಾಗಿದ್ದಾಗ ವಿಶ್ವದ ಕೆಲವು ಸಂಕೀರ್ಣ ದೇಶಗಳಲ್ಲಿರುವ ವಿಶ್ವಸಂಸ್ಥೆಯ ಕಚೇರಿಗಳಲ್ಲಿ ಕೆಲಸ ಮಾಡಬೇಕು ಎಂದು ಅಂದುಕೊಂಡಿದ್ದೆ. ವಿಶೇಷವೆಂದರೆ, ಈ ಕನಸು ನನಸಾಯಿತು ಕೂಡ. ಈ ಕನಸನ್ನು ನನಸು ಮಾಡಿದ ನನ್ನ ಧೈರ್ಯಕ್ಕೆ ಧನ್ಯವಾದಗಳು.

Advertisement

ಆದರೆ, ನನ್ನ ಧೈರ್ಯದ ವಿಷಯ ಇಲ್ಲಿದೆ. ವಿಶೇಷವೆಂದರೆ, ನಮಗೆ ಅಗತ್ಯವಾಗಿರುವಾಗೆಲ್ಲ ಧೈರ್ಯ ಕಾಣಿಸಿಕೊಳ್ಳುವುದಿಲ್ಲ. ಅದೊಂದು ರೀತಿ ಭಯ ಮತ್ತು ಶೌರ್ಯದ ನಡುವಿನ ಸಮತೋಲನವನ್ನು ಒಳಗೊಂಡ ಕಠಿನ ಪ್ರತಿಫ‌ಲನ ಮತ್ತು ನಾವು ಮಾಡುವ ನಿಜವಾದ ಕೆಲಸದ ಫ‌ಲಿತಾಂಶ. ಕೆಲವೊಮ್ಮೆ ನಾವು ಭಯವಿಲ್ಲದೇ ಮೂರ್ಖ ಕೆಲಸಗಳನ್ನು ಮಾಡುತ್ತೇವೆ. ಆದರೆ ಧೈರ್ಯವಿಲ್ಲದೇ ನಾವು ಎಂದಿಗೂ ನಮಗೆ ಗೊತ್ತಿರದ ಸ್ಥಳಗಳಿಗೆ ಕಾಲಿಡುವುದಿಲ್ಲ.

ಮೊದಲಿಗೆ ನಾನು ಬಳಸುವ ನನ್ನ ವ್ಹೀಲ್‌ಚೇರ್‌ ಬಗ್ಗೆ ಒಂದು ಮಾತು ಹೇಳುತ್ತೇನೆ. ನಾನು ಹಿಂದೆ ಯಾವಾಗಲೂ ಗಾಲಿಕುರ್ಚಿಯನ್ನು ಬಳಸಿಲ್ಲ. ನಾನು ನಿಮ್ಮಲ್ಲಿ ಅನೇಕರಂತೆ ಬೆಳೆದಿದ್ದೇನೆ, ಓಡುತ್ತಿದ್ದೆ, ಜಿಗಿಯುತ್ತಿದ್ದೆ ಮತ್ತು ನೃತ್ಯವನ್ನೂ ಮಾಡುತ್ತಿದ್ದೆ. ಈಗಲೂ ನಾನು ನೃತ್ಯ ಮಾಡಲು ಇಷ್ಟಪಡುತ್ತೇನೆ. ಹೀಗಿರುವಾಗ ನನ್ನ ಇಪ್ಪತ್ತರ ಮಧ್ಯದಲ್ಲಿ, ವಿವರಿ ಸಲಾಗದ ಸಂಕಟಗಳ ಸರಣಿಯ ಕಾಟ ಶುರುವಾಯಿತು. ಕೆಲವು ವರ್ಷಗಳ ಅನಂತರ ನಾನು

ಎಚ್‌ಐಬಿಎಂ ಎಂದು ಕರೆಯಲಾಗುವ ರೋಗ ದಿಂದ ಬಳಲುತ್ತಿದ್ದೆ ಎಂಬುದು ಗೊತ್ತಾಯಿತು. ಇದು ಸ್ನಾಯುಗಳನ್ನು ಹಾಳು  ಮಾಡುವ ರೋಗವಾಗಿದ್ದು, ಇದು ತಲೆಯಿಂದ ಕಾಲಿನವರೆಗೆ ಎಲ್ಲ ಸ್ನಾಯುಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಎಚ್‌ಐ

ಬಿಎಂ ಬಹಳ ಅಪರೂಪದ ರೋಗ. ಅಮೆರಿಕದಲ್ಲಿ 200ಕ್ಕಿಂತ ಕಡಿಮೆ ಜನರು ಈ ರೋಗಕ್ಕೆ ಒಳಗಾಗಿ ದ್ದಾರೆ. ಇದಕ್ಕೆ ಇಲ್ಲಿಯವರೆಗೆ ಯಾವುದೇ ಚಿಕಿತ್ಸೆ ಇಲ್ಲ. ಇದರ ಪ್ರಾರಂಭದ 10ರಿಂದ 15 ವರ್ಷಗಳಲ್ಲಿ, ಎಚ್‌ಐಬಿಎಂ ಸಾಮಾನ್ಯವಾಗಿ ಕುಂಟುತನಕ್ಕೆ ಕಾರಣವಾಗುತ್ತದೆ. ಅದಕ್ಕಾಗಿಯೇ ನಾನು ಈಗ ಗಾಲಿಕುರ್ಚಿಯನ್ನು ಬಳಸುತ್ತೇನೆ.

Advertisement

ಮೊದಲಿಗೆ ಈ ರೋಗ ಪತ್ತೆಯಾದಾಗ ಎಲ್ಲವೂ ಬದಲಾಯಿತು. ಈ ರೋಗ ಬರುವವರೆಗೆ ನನಗೆ ದೀರ್ಘ‌ಕಾಲದ ಕಾಯಿಲೆ ಅಥವಾ ಅಂಗವೈಕಲ್ಯಗಳ ಬಗ್ಗೆ ಯಾವುದೇ ಅನುಭವವಿರಲಿಲ್ಲ. ಈ ರೋಗವು ಹೇಗೆ ಪ್ರಗತಿ ಹೊಂದಬಹುದು ಎಂಬುದೂ ನನಗೆ ತಿಳಿದಿರಲಿಲ್ಲ. ಆದರೆ ನನ್ನ ಮಹತ್ವಾಕಾಂಕ್ಷೆಗಳು ಮತ್ತು ಕನಸುಗಳನ್ನು ಸೀಮಿತಗೊಳಿಸಲು ಮತ್ತು ಜೀವನ ದಿಂದ ಏನನ್ನು ನಿರೀಕ್ಷಿಸಬೇಕು ಎಂಬ ನನ್ನ ನಿರೀಕ್ಷೆಗಳನ್ನು ಬದಲಾಯಿಸಲು ಇತರ ಜನರು ನನಗೆ ಸಲಹೆ ಹೇಳು ವುದನ್ನು ಕೇಳು ವುದು ನನ್ನ ಪಾಲಿಗೆ ಅತ್ಯಂತ ನಿರಾಶಾ ದಾಯಕ ವಾಗಿತ್ತು. “ನೀವು ನಿಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ತ್ಯಜಿಸಬೇಕು’. “ಯಾರೂ ನಿನ್ನನ್ನು ಈ ರೀತಿ ಮದುವೆಯಾಗುವುದಿಲ್ಲ’ “ಒಂದು ವೇಳೆ ನೀವು ಮಕ್ಕಳನ್ನು ಮಾಡಿಕೊಂಡರೆ ಅತ್ಯಂತ ಸ್ವಾರ್ಥಿ ಯಾಗುತ್ತೀರಿ’, ಎಂಬ ಮಾತುಗಳು ಕೇಳಿಬರುತ್ತಿ ದ್ದವು. ಬೇರೆಯವರು ನನ್ನ ಕನಸುಗಳು ಮತ್ತು ಮಹತ್ವಾ ಕಾಂಕ್ಷೆಗಳ ಮೇಲೆ ಮಿತಿಗಳನ್ನು ಹಾಕುತ್ತಿದ್ದಾರೆ ಎಂಬ ಅಂಶವು ಅಸಂಬದ್ಧವಾಗಿತ್ತು. ಇವು ಸ್ವೀಕಾರಾರ್ಹ ವಲ್ಲದ ಕಾರಣ, ಇವುಗಳನ್ನು ನಿರ್ಲಕ್ಷಿಸಿದೆ.

ಈ ಎಲ್ಲ ಸಂಗತಿಗಳನ್ನು ಮೀರಿ ನಾನು ವಿವಾಹವಾದೆ, ಆದರೆ ಮಕ್ಕಳನ್ನು ಹೊಂದದಿರಲು ನಿರ್ಧರಿಸಿದೆ. ಅಷ್ಟೇ ಅಲ್ಲ, ಈ ರೋಗ ಪತ್ತೆಯಾದ ಬಳಿಕವೂ ವಿಶ್ವಸಂಸ್ಥೆಯೊಂದಿಗೆ ನನ್ನ ವೃತ್ತಿಜೀವನವನ್ನು ಮುಂದುವರಿಸಿದೆ. ಅಂಗೋಲಾದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಲು ಹೊರಟೆ. ಇದು 27 ವರ್ಷಗಳ ಕ್ರೂರ ಅಂತರ್ಯುದ್ಧದಿಂದ ಚೇತರಿಸಿಕೊಳ್ಳುತ್ತಿದೆ. ಹಾಗೆಯೇ ನನಗಿರುವ ರೋಗವನ್ನು ನನಗೆ ಕೆಲಸ ನೀಡಿದ್ದವರಿಗೆ ಐದು ವರ್ಷಗಳ ಕಾಲ ಹೇಳಿಯೇ ಇರಲಿಲ್ಲ. ಒಂದು ವೇಳೆ ಹೇಳಿದರೆ, ಎಲ್ಲಿ ಕೆಲಸ ಕಳೆದುಕೊಳ್ಳುತ್ತೇನೋ ಎಂಬ ಆತಂಕವಿತ್ತು. ನಾನು ಪೋಲಿಯೋ ಸಾಮಾನ್ಯವಾಗಿದ್ದ ದೇಶಗಳಲ್ಲಿ ಕೆಲಸ ಮಾಡುತ್ತಿದ್ದೆ. ಆದ್ದರಿಂದ ನಾನು ಪೋಲಿಯೋದಿಂದ ಬದುಕುಳಿದಿರಬಹುದು ಎಂದು ಯಾರಾದರೂ ಹೇಳುವುದನ್ನು ಕೇಳಿದಾಗ, ನನ್ನ ರಹಸ್ಯ ಸುರಕ್ಷಿತವಾಗಿದೆ ಎಂದು ಭಾವಿಸಿದ್ದೆ. ನಾನು ಏಕೆ ಕುಂಟುತ್ತಿದ್ದೆ ಎಂದು ಯಾರೂ ಕೇಳಲಿಲ್ಲ. ಆದ್ದರಿಂದ ನಾನು ಏನನ್ನೂ ಹೇಳಲಿಲ್ಲ.

ಎಚ್‌ಐಬಿಎಂನ ತೀವ್ರತೆಗೆ ಹೊಂದಿಕೊಳ್ಳಲು ನನಗೆ ದಶಕಗಳೇ ಬೇಕಾಯಿತು. ಈ ಅವಧಿಯಲ್ಲಿ ಮೂಲಭೂತ ಕಾರ್ಯಗಳನ್ನು ಎದುರಿಸುವುದೇ ಕಷ್ಟವಾಗಿತ್ತು. ಆದರೂ ನಾನು ಪ್ರಪಂಚದಾದ್ಯಂತ ಕೆಲಸ ಮಾಡುವ ನನ್ನ ಕನಸನ್ನು ಮುಂದುವರಿಸಿದೆ. ಹೈಟಿಯಲ್ಲಿ ಯುನಿಸೆಫ್‌ಗೆ ಅಂಗವೈಕಲ್ಯ ಕೇಂದ್ರಕ್ಕೆ  ನೇಮಕಗೊಂಡೆ. ಅಲ್ಲಿ ನಾನು 2010ರ ವಿನಾಶಕಾರಿ ಭೂಕಂಪದ ಅನಂತರ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ. ತದನಂತರ ನನ್ನ ಕೆಲಸವು ನನ್ನನ್ನು ಅಮೆರಿಕಕ್ಕೆ ಕರೆತಂದಿತು. ರೋಗವು ಗಮ ನಾರ್ಹವಾಗಿ ಮುಂದುವರಿದರೂ ಮತ್ತು ನನಗೆ ಸುತ್ತಲು ಕಾಲಿನ ಬ್ರೇಸ್‌ಗಳು ಮತ್ತು ವಾಕರ್‌ ಅಗತ್ಯವಿದ್ದರೂ ನಾನು ಇನ್ನೂ ಸಾಹಸಕ್ಕಾಗಿ ಹಾತೊರೆಯುತ್ತಿದ್ದೆ. ಈ ಬಾರಿ ನಾನು ಭವ್ಯವಾದ ಹೊರಾಂಗಣ ಸಾಹಸದ ಕನಸು ಕಾಣಲು ಪ್ರಾರಂಭಿಸಿದೆ. ಅತ್ಯಂತ ರಮಣೀಯ ಗ್ರ್ಯಾಂಡ್‌ ಕ್ಯಾನ್ಯನ್‌ಗೆ ಹೋಗಬೇಕು ಅಂದುಕೊಂಡೆ.

ರಿಮ್‌ಗೆ ಭೇಟಿ ನೀಡುವ ಪ್ರತೀ 50 ಲಕ್ಷ ಮಂದಿಯಲ್ಲಿ ಕೇವಲ ಶೇ.1ರಷ್ಟು ಮಂದಿ ಮಾತ್ರ ಈ ಕಣಿವೆಯ ಕೆಳಗೆ ಇಳಿಯುತ್ತಾರೆ. ನಾನು ಕೂಡ ಇದರಲ್ಲಿ ಒಬ್ಬಳಾಗಬೇಕು ಎಂದು ಅಂದುಕೊಂಡೆ. ಒಂದೇ ವಿಷಯವೆಂದರೆ ಗ್ರ್ಯಾಂಡ್‌ ಕ್ಯಾನ್ಯನ್‌ಗೆ ನಿಖರವಾಗಿ ಪ್ರವೇಶಿಸಲು ಸಾಧ್ಯವಿಲ್ಲ. ಲಂಬವಾದ ಸಡಿಲವಾದ ಭೂಪ್ರದೇಶದ 5,000 ಅಡಿ ಕೆಳಗೆ ಇಳಿಯಲು ನನಗೆ ಸ್ವಲ್ಪ ಸಹಾಯ ಬೇಕಾಗಿತ್ತು. ಇಲ್ಲಿಗೆ ಇಳಿಯಲು ಸಾಧ್ಯವಿಲ್ಲ ಅಂದುಕೊಂಡಾಗ ನಾನು ಬೇರೊಂದು ಮಾರ್ಗವನ್ನು ಆರಿಸಿಕೊಂಡೆ. ಅಂದರೆ ಕುದುರೆ ಸವಾರಿ ಕಲಿಯಲು ಆರಂಭಿಸಿದೆ.

ಸುಮಾರು ನಾಲ್ಕು ವರ್ಷಗಳ ಕಾಲ ಕುದುರೆ ಸವಾರಿ ಕಲಿತೆ. 2018ರ ಎಪ್ರಿಲ್‌ 12ರಂದು 12 ದಿನಗಳ ಗ್ರ್ಯಾಂಡ್‌ ಕ್ಯಾನ್ಯನ್‌ನ ಯಾತ್ರೆ ಕೈಗೊಂಡೆ. ಈಗ ನನ್ನಲ್ಲಿ ಭಯ ಹೋಗಿ ಧೈರ್ಯ ಬಂದಿತ್ತು. ಅತೀವ ಎಚ್ಚರಿಕೆಯಿಂದ ಕುದುರೆಯ ಮೇಲೆ ನಾಲ್ಕು ದಿನ, ಕೊಲೊರಾಡೋ ನದಿಯ 150 ಮೈಲಿಗಳ ರಾಫ್ಟಿಂಗ್‌ ಎಂಟು ದಿನಗಳ ಕಾಲ ಸಾಗಿದೆ. ಈ ಅವಧಿಯಲ್ಲಿ ನನ್ನ ಭಯವನ್ನು ನಾನು ಯಾರಿಗೂ ತೋರಿಸಲೇ ಇಲ್ಲ. ಇದಕ್ಕಿಂತ ಧೈರ್ಯವನ್ನೇ ಪ್ರದರ್ಶಿಸಿದ್ದೆ.

ಈಗ ನನ್ನಲ್ಲಿ ಅಧೈರ್ಯದ ಮಾತೇ ಇಲ್ಲ. ನನ್ನ ಭಯವು ಹೆಚ್ಚಾಗಲು ಬಿಡದಂತೆ ನಾನು ನನ್ನೊಳಗಿನ ಪ್ರತಿ ಔನ್ಸ್ ಧೈರ್ಯವನ್ನು ಒಟ್ಟುಗೂಡಿಸಿದೆ. ಸೌತ್‌ ರಿಮ್‌ ಅನ್ನು ಪ್ರಾರಂಭಿಸಿ, ನನ್ನನ್ನು ಸಂಯೋಜಿಸಲು ನಾನು ಮಾಡಬಹುದಾದದ್ದು ಆಳವಾಗಿ ಉಸಿರಾಡು ವುದು, ಮೋಡಗಳನ್ನು ದಿಟ್ಟಿಸುವುದು ಮತ್ತು ನನ್ನ ತಂಡದ ಧ್ವನಿಗಳ ಮೇಲೆ ಕೇಂದ್ರೀಕರಿಸುವುದನ್ನು ಮಾಡಿದೆ. ಈ ದಾರಿಯಲ್ಲಿ ಕೆಲವೊಮ್ಮೆ ವಿಪತ್ತುಗಳೂ ಆದವು. ದಾರಿಯಲ್ಲಿ ಒಮ್ಮೆ ಜೀನಿನ ನಿಯಂತ್ರಣ ಸಿಗದೇ ಕುದುರೆಯ ತಲೆ ಭಾಗದ ಶಿರಸ್ತ್ರಾಣದ ಮೇಲೆ ಬಿದ್ದಿದ್ದೆ. ಆಗ ನನ್ನ ತಲೆಯಲ್ಲಿ ಪೆಟ್ಟೂ ಆಯಿತು.

ಮುಂದೆ ಪ್ರಬಲ ರ್ಯಾಪಿಡ್‌ಗಳು ಬಂದವು. ಗ್ರ್ಯಾಂಡ್‌ ಕ್ಯಾನ್ಯನ್‌ನಲ್ಲಿರುವ ಕೊಲೊರಾಡೋ ನದಿಯು ದೇಶದ ಅತೀ ಹೆಚ್ಚು ಬಿಳಿ ನೀರನ್ನು ಹೊಂದಿದೆ. ಮತ್ತು ನಾವು ಮುಳುಗಬೇಕಾದ ಸಂದರ್ಭದಲ್ಲಿ ಸಿದ್ಧರಾಗಿರಲು, ನಾನು ಕ್ಷಿಪ್ರವಾಗಿ ಈಜುವುದನ್ನು ನಾವು ಅಭ್ಯಾಸ ಮಾಡುತ್ತೇವೆ. ಆದರೆ ಈ ಈಜು ಸುಂದರವಾಗಿರುವುದಿಲ್ಲ ಎಂಬುದನ್ನು ನೆನಪಿನಲ್ಲಿ ಇಡಬೇಕು.

ಒಮ್ಮೆ ನಾನು ತಪ್ಪಾಗಿ ಈಜಿದ್ದರಿಂದ ನೀರಿನಲ್ಲಿ ಉಸಿರುಗಟ್ಟಿದ್ದೆ. ಮುಂದಕ್ಕೆ ಹೋಗಲೂ ಸಾಧ್ಯವಾಗದ ಪರಿಸ್ಥಿತಿ ಇತ್ತು. ಆದರೂ ಬಿಡಲಿಲ್ಲ. ಗ್ರ್ಯಾಂಡ್‌ ಕ್ಯಾನ್ಯ ನ್‌ನ ಅದ್ಭುತವಾದ ಅರಣ್ಯ ಮತ್ತು ಜಲಪಾತಗಳು, ಕಣಿವೆಗಳನ್ನು ನೋಡಿಕೊಂಡು ಸಾಗಿದೆವು.

ಈ ಪ್ರವಾಸವು ನಾನು ಹಿಂದೆಂದೂ ಅನುಭವಿಸದ ಭಯದ ಮಟ್ಟವನ್ನು ನನಗೆ ತೋರಿಸಿತು. ಆದರೆ ಅದಕ್ಕಿಂತ ಮುಖ್ಯವಾಗಿ, ನಾನು ಎಷ್ಟು ಧೈರ್ಯ ಶಾಲಿಯಾಗಬಲ್ಲೆ ಎಂಬುದನ್ನು ಇದು ನನಗೆ ತೋರಿಸಿತು. ನನ್ನ ಗ್ರ್ಯಾಂಡ್‌ ಕ್ಯಾನ್ಯನ್‌ ಪ್ರಯಾಣ ಸುಲಭವಾಗಿರಲಿಲ್ಲ. ಇದು ಭಯಾನಕವಾಗಿತ್ತು, ಒತ್ತಡದಿಂದ ಕೂಡಿತ್ತು, ಮತ್ತೆ ಆಹ್ಲಾದಕರವಾಗಿತ್ತು.

ಈಗ ಪ್ರವಾಸ ಮುಗಿದಿದೆ, ನಾವು ಏನನ್ನು ಸಾಧಿಸಿದ್ದೇವೆ ಎಂಬುದರ ಬಗ್ಗೆ ಬ್ಲೇಸ್‌ ಮಾಡುವುದು ಸುಲಭ. ನಾನು ಮತ್ತೆ ನದಿಯನ್ನು ತೆಪ್ಪದಲ್ಲಿ ದಾಟಲು ಬಯಸುತ್ತೇನೆ. ಈಗ ಅದೇ ನದಿ. 277 ಮೈಲಿ ಯುದ್ದಕ್ಕೂ ತೆಪ್ಪದಲ್ಲೇ ಹೋಗಲು ಇಷ್ಟಪಡುತ್ತೇನೆ.

ಜೀವನವು ಈಗಾಗಲೇ ಭಯಾನಕವಾಗಿದೆ, ಆದ್ದ ರಿಂದ ನಮ್ಮ ಕನಸುಗಳು ನನಸಾಗಬೇಕಾದರೆ ನಾವು ಧೈರ್ಯವಾಗಿರಬೇಕು. ನನ್ನ ಭಯಗಳನ್ನು ಎದು ರಿಸುವಲ್ಲಿ ಮತ್ತು ಧೈರ್ಯವನ್ನು ಕಂಡು ಕೊಳ್ಳುವಲ್ಲಿ, ನನ್ನ ಜೀವನವು ಅಸಾಧಾರಣವಾಗಿದೆ ಎಂದು ನಾನು ಹೇಳುತ್ತೇನೆ. ಆದ್ದರಿಂದ ದೊಡ್ಡದಾಗಿ ಬದುಕಿ ಮತ್ತು ನಿಮ್ಮ ಧೈರ್ಯದಿಂದ ನಿಮ್ಮ ಭಯವನ್ನು ಮೀರಿಸಲು ಪ್ರಯತ್ನಿಸಿ. ಹೀಗಾದಾಗ ಅದು ನಿಮ್ಮನ್ನು ಎಲ್ಲಿಗೆ ಬೇಕಾದರೂ ಕರೆದೊಯ್ಯಬಹುದು.

-ಕಾರಾ ಇ ಯಾರ್‌ ಖಾನ್‌,
ಅಂಗವಿಕಲ ಮಹಿಳೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next