Advertisement

ಕಾರು ಪಲ್ಟಿಯಾಗಿ ನಾಲ್ವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳ ದುರ್ಮರಣ

09:16 AM May 02, 2019 | Team Udayavani |

ಯಾದಾದ್ರಿ (ತೆಲಂಗಾಣ): ಜಿಲ್ಲೆಯ ನಾಗಿನೇನಿಪಲ್ಲಿ ಬಳಿ ಕಾರೊಂದು ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಪರಿಣಾಮ ನಾಲ್ವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ಬುಧವಾರ ಬೆಳಗಿನ ಜಾವ ನಡೆದಿದೆ.

Advertisement

ಇಬ್ರಾಹಿಂ ಪಟ್ನಂನ ಹಿಂದು ಕಾಲೇಜ್‌ನ ಬಿ.ಟೆಕ್‌ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸ್ಪೂರ್ತಿ, ಪ್ರಣತಿ, ಚೈತನ್ಯ, ವಿನಿತ ಎನ್ನುವವರು ಮೃತ ದುರ್‌ದೈವಿಗಳಾಗಿದ್ದಾರೆ.

ಕಾರಿನಲ್ಲಿದ್ದ ಮನೀಷ್‌ ರೆಡ್ಡಿ ಗಂಭೀರವಾಗಿ ಗಾಯಗೊಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಪರೀಕ್ಷೆ ಮುಗಿದ ಬಳಿಕ ಬೊಮ್ಮಾಲಾಪುರಂನ ಖಾಸಗಿ ಫಾರ್ಮ್ ಹೌಸ್‌ಗೆ ಪಾರ್ಟಿಗೆಂದು ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next