Advertisement

ಮರವಂತೆ ಬೀಚ್ ಗೆ ಬಿದ್ದ ಕಾರು: ಓರ್ವ ಸಾವು ; ಇನ್ನೋರ್ವ ನಾಪತ್ತೆ

12:28 PM Jul 03, 2022 | Team Udayavani |

ಕುಂದಾಪುರ : ಮರವಂತೆಯ ಮಾರಸ್ವಾಮಿ ದೇವಸ್ಥಾನದ ಬಳಿ ಹೆದ್ದಾರಿಯಿಂದ ಕಾರು ಸಮುದ್ರಕ್ಕೆ ಬಿದ್ದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ‌.

Advertisement

ಕಾರಿನಲ್ಲಿ ನಾಲ್ವರಿದ್ದು, ಓರ್ವ ಸಾವನ್ನಪ್ಪಿದ್ದು, ಮತ್ತೊಬ್ಬರು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ. ಇಬ್ಬರು ಪಾರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದ ಕೋಟೇಶ್ವರ ಬಳಿಯಿಂದ ಬೈಂದೂರು ಕಡೆಗೆ ಕಾರು ತೆರಳುತ್ತಿತ್ತು ಎನ್ನಲಾಗಿದೆ.

ಮೃತಪಟ್ಟ ಯುವಕನನ್ನು ಬೀಜಾಡಿ ಗೋಳಿಬೆಟ್ಟು ನಿವಾಸಿ ವಿರಾಜ್ ಆಚಾರ್ಯ (28) ಎಂದು ಗುರುತಿಸಲಾಗಿದೆ. ಕಾಡಿನಕೊಂಡ ನಿವಾಸಿ ರೋಶನ್ ಆಚಾರ್ (23) ನಾಪತ್ತೆಯಾದವರು.

ಕಾರು ನಿಯಂತ್ರಣ ತಪ್ಪಿ ಸಮುದ್ರದ ತಡೆಗೋಡೆಯ ಬಂಡೆಗಳ ಮೇಲೆ ಉರುಳಿದಾಗ ಕಾರ್ತಿಕ್ ಮತ್ತು ಸಂದೀಪ್ ಕಾರಿನಿಂದ ಜಿಗಿದಿದ್ದಾರೆ. ವಿರಾಜ್ ಸೀಟ್ ಬೆಲ್ಟ್ ಧರಿಸಿದ್ದ ಕಾರಣ ಮೃತದೇಹ ಕಾರಿನಲ್ಲಿತ್ತು. ಆದರೆ ರೋಶನ್ ನಾಪತ್ತೆಯಾಗಿದ್ದಾರೆ.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next