Advertisement

ಕಾರು ಮಾರಾಟ ಪ್ರಕರಣ : ಸಿಐಡಿ ಅಧಿಕಾರಿ ಜತೆ ಆರೋಪಿ ಸಂಭಾಷಣೆ!

01:03 AM Mar 05, 2021 | Team Udayavani |

ಮಂಗಳೂರು: ಇಬ್ಬರು ಅಧಿಕಾರಿಗಳ ಸಹಿತ ನಾಲ್ಕು ಮಂದಿ ಸಿಸಿಬಿ ಪೊಲೀಸರ ಅಮಾನತಿಗೆ ಕಾರಣವಾದ ಕಾರು ಮಾರಾಟ ಪ್ರಕರಣವು ದಿನಕ್ಕೊಂದು ಬೆಳವಣಿಗೆ ಪಡೆಯುತ್ತಿದ್ದು, ನಾಲ್ವರು ಆರೋಪಿಗಳ ಪೈಕಿ ಒಬ್ಟಾತ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಯೊಬ್ಬರ ಜತೆ ಮೊಬೈಲ್‌ ಫೋನ್‌ನಲ್ಲಿ ಮಾತುಕತೆ ನಡೆಸಿರುವುದು ಬೆಳಕಿಗೆ ಬಂದಿದೆ.

Advertisement

ಕಾರು ಮಾರಾಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಾರ್ಕೊಟಿಕ್‌ ಡ್ರಗ್‌ ಇನ್‌ಸ್ಪೆಕ್ಟರ್‌ ರಾಮಕೃಷ್ಣ, ಸಿಸಿಬಿ ಎಸ್‌ಐ ಕಬ್ಬಳ್‌ರಾಜ್‌, ಎಚ್‌ಪಿಸಿ ಅಶಿತ್‌ ಡಿ’ಸೋಜಾ ಮತ್ತು ರಾಜ ಅವರನ್ನು ಅಮಾನತು ಮಾಡಲಾಗಿದೆ. ಅವರಲ್ಲಿ ಒಬ್ಬರು ಸಿಐಡಿ ಅಧಿಕಾರಿಗೆ ಕರೆ ಮಾಡಿ ಮಾತನಾಡಿದ್ದು, ಇದು ಗೃಹ ಇಲಾಖೆ ಮತ್ತು ಹಿರಿಯ ಸಿಐಡಿ ಅಧಿಕಾರಿಗಳ ಗಮನಕ್ಕೂ ಬಂದಿದೆ ಎನ್ನಲಾಗಿದೆ. ಕಾರು ಮಾರಾಟ ಮಾತ್ರವಲ್ಲದೆ 2019ರ ಅಕ್ಟೋಬರ್‌ನಲ್ಲಿ ಸಿಸಿಬಿ ಪೊಲೀಸರು ಮಹಿಳೆಯೊಬ್ಬರ ಹಾಲಿನ ಡೈರಿಗೆ ನುಗ್ಗಿ 86,000 ರೂ. ಹಣವನ್ನು ಕೊಂಡೊಯ್ದ ಆರೋಪವೂ ಕೇಳಿ ಬಂದಿದೆ. ಈ ಬಗ್ಗೆ ಪೊಲೀಸ್‌ ದೂರು ನೀಡಿದ್ದರೂ ನ್ಯಾಯ ಸಿಕ್ಕಿಲ್ಲ ಎಂದು ಆ ಮಹಿಳೆ ದೂರಿ¨ªಾರೆ.

Advertisement

Udayavani is now on Telegram. Click here to join our channel and stay updated with the latest news.

Next