Advertisement

ಪೊಲೀಸ್ ಠಾಣೆ ಎದುರಿನಲ್ಲೇ ಕಾರು ಪಾರ್ಕಿಂಗ್ ಪೊಲೀಸರು,ಸಾರ್ವಜನಿಕರ ಸಂಚಾರಕ್ಕೆ ತೊಂದರೆ

02:29 PM Aug 03, 2022 | Team Udayavani |

ಗಂಗಾವತಿ: ನಗರದ ಪೊಲೀಸ್ ಠಾಣೆಯ ಹೋಗುವ ರಸ್ತೆಯಲ್ಲಿ ಕಾರೊಂದನ್ನು ಮಾಲೀಕರು ಬಿಟ್ಟು ಹೋಗಿದ್ದು, ಇದರಿಂದ ಪೊಲೀಸ್ ಠಾಣೆಗೆ ಹೋಗುವ ಪೊಲೀಸರು ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ.

Advertisement

ಬುಧವಾರ ನಗರ ಪೊಲೀಸ್ ಠಾಣೆಗೆ ಬಳ್ಳಾರಿ ಪೊಲೀಸ್ ಮಹಾನಿರ್ದೇಶಕರ ಭೇಟಿ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಸಕಲ ಸಿದ್ಧತೆಯನ್ನು ಮಾಡಿಕೊಳ್ಳುವ ಸಂದರ್ಭದಲ್ಲಿ ವ್ಯಕ್ತಿಯೋರ್ವ ತಮ್ಮ ಕಾರಣ ಪೊಲೀಸ್ ಠಾಣೆಯ ಎದುರು ನೆಲೆ ಬಿಟ್ಟು ಹೋಗಿರುವುದು ಕಂಡು ಬಂದಿದೆ. ಇದರಿಂದ ಒಳಗೆ ಹೋಗಲು ಸಾರ್ವಜನಿಕರಿಗೆ ಮತ್ತು ಪೊಲೀಸ್ ವಾಹನಗಳಿಗೆ ತೊಂದರೆಯಾಗಿದೆ. ಈ ಮಧ್ಯೆ ಬಳ್ಳಾರಿಯ ವಲಯ ಪೊಲೀಸ್ ಮಹಾ ನಿರ್ದೇಶಕರು ಗಂಗಾವತಿ ಪೊಲೀಸ್ ಠಾಣೆಗೆ ಭೇಟಿ ಕೊಡುವ ಹಿನ್ನೆಲೆಯಲ್ಲಿ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದು ಪೊಲೀಸ್ ಠಾಣೆಯ ಎದುರಿನಲ್ಲಿ ಖಾಸಗಿ ವಾಹನ ನಿಲುಗಡೆಯಿಂದ ಪೊಲೀಸರಿಗೆ ಮುಜುಗರ ಉಂಟಾಗಿದೆ . 2 ತಾಸುಗಳ ಕಾಲ ಪೊಲೀಸರು ವಾಹನದ ಮಾಲೀಕನ ಗುರುತು ಪತ್ತೆ ಕಾರ್ಯ ಮಾಡಿದರೂ ವಾಹನ ಯಾವುದೆಂದು ತಿಳಿದುಬಂದಿಲ್ಲ. ಕೊಪ್ಪಳದ ಸಾರ್ವಜನಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಈ ಕಾರಿನ ಮಾಹಿತಿ ಲಭ್ಯವಿದ್ದರೂ ಮೊಬೈಲ್ ಸೇರಿದಂತೆ ಯಾವುದೇ ದೂರವಾಣಿಯ ಮಾಹಿತಿಯನ್ನು ಆರ್ ಟಿಒ ಕಚೇರಿಯಲ್ಲಿ ನೀಡಲಾಗಿಲ್ಲ.

ಪೋಲಿಸ್ ಠಾಣೆಯ ಎದುರಿಗೆ ಈ ವಾಹನ ಬಿಟ್ಟಿರುವುದರಿಂದ ಪೋಲಿಸರು ಈ ವಾಹನ ತೆರವುಗೊಳಿಸಲು ಹರಸಾಹಸ ಮಾಡಿದರೂ ಮಾಲೀಕನು ಪತ್ತೆಯಾಗಿಲ್ಲ.

ಈ ಮಧ್ಯೆ ಸಂಚಾರಿ ಪೊಲೀಸರು ಕಾರಿನ ಹಿಂದಿನ ವೀಲ್ ಗೆ ಲಾಕ್ ಅಳವಡಿಸಿ ಮಾಲೀಕನ ಬರುವಿಕೆಗಾಗಿ ಕಾಯುತ್ತಿದ್ದಾರೆ . ಪೋಲಿಸ್ ಠಾಣೆಯ ಎದುರಿಗೆ ತಮ್ಮ ಕಾರನ್ನು ಬಿಟ್ಟಿರುವ ಮಾಲೀಕ ಎನ್ನುವ ಕುರಿತು ಪೊಲೀಸರು ರಸ್ತೆಯಲ್ಲಿ ಹೋಗುವ ಬರುವವರನ್ನೂ ಕೇಳುತ್ತಿದ್ದು ಮಾಹಿತಿ ಲಭ್ಯವಾಗಿಲ್ಲ.

ಕಾರಿನ ಮಾಲಿಕನ ವಿರುದ್ಧ ಕೇಸ್ ದಾಖಲಾಗುವ ಸಂಭವವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next