Advertisement

ಕಾರು ಟೋಯಿಂಗ್ ಮಾಡುವ ವೇಳೆ ಅಗ್ನಿ ಅವಘಡ

07:29 AM Oct 01, 2022 | Team Udayavani |

ರಾಮನಗರ: ಅಪಘಾತವಾಗಿದ್ದ ಕಾರು ಟೋಯಿಂಗ್ ಮಾಡುವಾಗ ಅಗ್ನಿಅವಗಡ ಸಂಭವಿಸಿದ್ದು, ಬಿಡದಿ ಬಳಿ ಅಪಘಾತವಾಗಿದ್ದ ಕಾರು ಮೈಸೂರಿಗೆ ಟೋಯಿಂಗ್ ಮಾಡುತ್ತದ್ದ ವೇಳೆ ಚನ್ನಪಟ್ಟಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೋಮನಹಳ್ಳಿ ಬಳಿ ಘಟನೆ ನಡೆದಿದೆ.

Advertisement

ಘಟನೆಗೆ ಅಪಘಾತವಾಗಿದ್ದ ಕಾರಿನಿಂದ ಟೋಯಿಂಗ್ ಮಾಡುವ ವೇಳೆ ಡೀಸೆಲ್ ಲೀಕ್ ಆಗಿದ್ದು, ಶಾರ್ಟ್ ಸರ್ಕ್ಯೂಟ್ ಬೆಂಕಿ ಹೊತ್ತಿಕೊಳ್ಳಲು ಕಾರಣವೆಂದು ತಿಳಿದುಬಂದಿದೆ.

ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಚನ್ನಪಟ್ಟಣ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಸದ್ಯ ಯಾವುದೇ ಪ್ರಾಣಪಾಯವಾಗಿಲ್ಲ ಎನ್ನಲಾಗಿದೆ. ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next