Advertisement

ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರು ಚಾಲನೆ: ಆವರಣಗೋಡೆ, ಎರಡು ದ್ವಿಚಕ್ರ ವಾಹನ, ಕಾರಿಗೆ ಢಿಕ್ಕಿ

09:43 AM Dec 10, 2020 | keerthan |

ಮಂಗಳೂರು: ಮದ್ಯ ಸೇವಿಸಿ ಅತಿಯಾದ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಲಾಯಿಸಿ ಅಂಗಡಿಯ ಅವರಣಗೋಡೆ ಹಾಗೂ ಎದುರಿನಲ್ಲಿ ನಿಂತಿರುವ ಎರಡು ದ್ವಿಚಕ್ರ ಹಾಗು ಕಾರಿಗೆ ಢಿಕ್ಕಿ ಹೊಡೆದ ಘಟನೆ ಮಂಗಳೂರಿನ ಪದವಿನಂಗಡಿ ಬಳಿ ಬುಧವಾರ ತಡರಾತ್ರಿ ನಡೆದಿದೆ.

Advertisement

ಅಪಘಾತದ ರಭಸಕ್ಕೆ ಎರಡು ಕಾರುಗಳು ನಜ್ಜುಗುಜ್ಜಾಗಿವೆ. ಈ ವೇಳೆ ಸ್ಥಳೀಯರು ಕಾರು ತಡೆದ ಪೊಲೀಸ್ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗಮಿಸಿದ ಸಂಚಾರಿ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಶಾಲಾ ಬ್ಯಾಗ್‌ ತೂಕ ಇಳಿಕೆ: “ಸ್ಕೂಲ್‌ ಬ್ಯಾಗ್‌ ಪಾಲಿಸಿ-2020′ ಸಿದ್ಧಪಡಿಸಿದ ಕೇಂದ್ರ

ಕಾರು ಚಾಲಕ ಮದ್ಯಪಾನ ಮಾಡಿ ಕಾರು ಚಲಾಯಿಸಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆದರೆ ಮದ್ಯಪಾನ ಮಾಡಿ ಅಪಘಾತ ನಡೆಸಿದ ವ್ಯಕ್ತಿಯನ್ನು ತಪಾಸಣೆ ಮಾಡಲಿಲ್ಲ ಎಂದು ಸ್ಥಳೀಯರು ಪೊಲೀಸರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

Advertisement

Advertisement

Udayavani is now on Telegram. Click here to join our channel and stay updated with the latest news.

Next