Advertisement

ಕೆರೆಗೆ ಬಿದ್ದ ಕಾರು: ನಾಲ್ವರು ಪವಾಡಸದೃಶ ರೀತಿಯಲ್ಲಿ ಪಾರು

11:47 AM Apr 08, 2019 | keerthan |

ಶಿವಮೊಗ್ಗ: ಎದುರಿನಲ್ಲಿ ಬರುತ್ತಿದ್ದ ವಾಹನಕ್ಕೆ ಸೈಡ್ ಕೊಡಲು ಹೋದ ಕಾರು ಕೆರೆಗೆ ಬಿದ್ದ ಘಟನೆ ರವಿವಾರ ಮಧ್ಯಾಹ್ನ ಶಿವಮೊಗ್ಗದಲ್ಲಿ ನಡೆದಿದೆ. ಕಾರಿನಲ್ಲಿದ್ದ ನಾಲ್ವರೂ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

Advertisement

ಶೀರೂರು ಗ್ರಾಮದ ರಾಜು ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಪ್ರಜ್ವಲ್ ಮತ್ತು ರಮ್ಯಾ ಪ್ರಾಣಾಪಾಯದಿಂದ ಪಾರಾದವರು. ಇವರು ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next